August 11, 2026
Tuesday, August 11, 2026
spot_img

ದಾಂಡೇಲಿಯಲ್ಲಿ ಚಿರತೆ ಪ್ರತ್ಯಕ್ಷ: ಐಪಿಎಂ ಕಾಲೋನಿ ನಿವಾಸಿಗಳಲ್ಲಿ ಮನೆ ಮಾಡಿದ ಆತಂಕ

ಹೊಸದಿಗಂತ ವರದಿ ದಾಂಡೇಲಿ:

ದಾಂಡೇಲಿಯ ಐಪಿಎಂ ಕಾಲೋನಿಯಲ್ಲಿ ಸೋಮವಾರ ತಡರಾತ್ರಿ ಚಿರತೆಯೊಂದು ಪ್ರತ್ಯಕ್ಷವಾದ ಘಟನೆ ನಡೆದಿದೆ.

ದಾಂಡೇಲಿಯ ಕಾಂಗ್ರೆಸ್ ಮುಖಂಡರಾದ ಪ್ರತಾಪ್ ಸಿಂಗ್ ರಜಪೂತ್ ಹಾಗೂ ಅವರ ಸ್ನೇಹಿತ  ಬಲರಾಜ್ ಅವರು ಐಪಿಎಂ ಗೆ ಹೋಗಿ ಹಿಂದುರುಗಿ ಬರುತ್ತಿದ್ದಾಗ ಚಿರತೆ ಪ್ರತ್ಯಕ್ಷವಾಗಿದೆ‌. ತಕ್ಷಣವೇ ಅವರು ತಮ್ಮ ಮೊಬೈಲ್ ಕ್ಯಾಮಾರದಲ್ಲಿ ಚಿರತೆಯ ಚಲನವಲನವನ್ನು ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ:

ಐಪಿಎಂ ಕಾಲೋನಿ ಜನವಸತಿ ಪ್ರದೇಶವಾಗಿದ್ದಲ್ಲದೇ ನಾಲ್ಕೈದು ಹೋಂ ಸ್ಟೇ ಗಳು ಇದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇದೀಗ ಈ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !