September 6, 2026
Sunday, September 6, 2026
spot_img

‘ಪ್ರಜಾಸೇವಕ ಎನ್ನುವುದು ಬಾಯಿಮಾತಿಗಷ್ಟೇ’: ಡಿಕೆಶಿ ಹೇಳಿಕೆಗೆ ಹೊರಟ್ಟಿ ಕಿಡಿ

ಹೊಸದಿಗಂತ ವರದಿ ಕೊಪ್ಪಳ:

ನಾನು ಪ್ರಜಾಸೇವಕ ಎಂದು ಸಿಎಂ ಡಿಕೆ ಶಿವಕುಮಾರ್​ ಹೇಳಿರುವುದೇ ತಪ್ಪು ಎಂದು ಮಾಜಿ ಸಭಾಪತಿ ಬಸವರಾಜ್​​​ ಹೊರಟ್ಟಿ ಕಿಡಿಕಾರಿದ್ದಾರೆ.

ಪ್ರಜಾಸೇವಾ ಅಭಿಯಾನದ ವೇಳೆ ‘ನನ್ನನ್ನು ನಾಡಿನ ದೊರೆ ಎನ್ನಬೇಡಿ, ಪ್ರಜಾಸೇವಕ ಎನ್ನಿ’ ಎಂದು ಡಿಕೆ ಶಿವಕುಮಾರ್​​ ಹೇಳಿಕೆಗೆ ಪ್ರತಿಕ್ರಿಯಿಸಿದ ಬಸವರಾಜ್​​​ ಹೊರಟ್ಟಿ, ‘ಕೇವಲ ಬಾಯಿಮಾತಿನ ಘೋಷಣೆಗಳಿಂದ ಪ್ರಯೋಜನವಿಲ್ಲ, ಕೃತಿಯಲ್ಲಿ ಮಾಡಿ ತೋರಿಸಬೇಕು ಎಂದರು.

ಪ್ರಜಾಸೇವಕ ಎಂದ ಮಾತ್ರಕ್ಕೆ ಮುಖ್ಯಮಂತ್ರಿ ಕುರ್ಚಿ ಬಿಟ್ಟು ಕೆಳಗೆ ಕೂರುತ್ತಾರೆಯೇ ಎಂದು ಪ್ರಶ್ನಿಸಿದರು. ನಾನು ಪ್ರಜಾಸೇವಕ ಎಂದು ಸಿಎಂ ಹೇಳಿರುವುದು ತಪ್ಪು’ ಎಂದು ಗುಡುಗಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !