February 18, 2026
Wednesday, February 18, 2026
spot_img

ಕಾಂಗ್ರೆಸ್ ಭವನಗಳಿಗೆ ‘ಸರ್ಕಾರಿ ಸೈಟ್’ ಭಾಗ್ಯ: ನಾಲ್ಕು ಜಿಲ್ಲೆಗಳಿಗೆ ನಿವೇಶನ ಮಂಜೂರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರ್ಕಾರವು ಕಾಂಗ್ರೆಸ್ ಭವನಗಳ ನಿರ್ಮಾಣಕ್ಕೆ ಸರ್ಕಾರಿ ಭೂಮಿ ನೀಡುವ ಪ್ರಕ್ರಿಯೆಯನ್ನು ಮುಂದುವರಿಸಿದೆ. ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮತ್ತೆ ನಾಲ್ಕು ಪ್ರದೇಶಗಳಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ.

ಪ್ರಮುಖವಾಗಿ ಮಂಜೂರಾದ ಜಾಗಗಳ ವಿವರ:

ಮಂಡ್ಯ: ನಗರಾಭಿವೃದ್ಧಿ ಪ್ರಾಧಿಕಾರದ ವಿವೇಕಾನಂದ ಬಡಾವಣೆಯಲ್ಲಿ 1,457 ಚದರ ಮೀಟರ್ ವಿಸ್ತೀರ್ಣದ ನಿವೇಶನವನ್ನು 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ನೀಡಲು ಸಂಪುಟ ಸಮ್ಮತಿ ಸೂಚಿಸಿದೆ.

ಇತರೆ ಜಿಲ್ಲೆಗಳು: ಉಡುಪಿಯ ಅಂಜಾರು ಗ್ರಾಮದಲ್ಲಿ 20 ಸೆಂಟ್ಸ್ ಜಾಗ, ಕುಂದಾಪುರದಲ್ಲಿ 11 ಸೆಂಟ್ಸ್ ಜಾಗ ಮತ್ತು ನೆಲಮಂಗಲದಲ್ಲಿ 00.08 ಗುಂಟೆ ಜಾಗವನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಮಂಜೂರು ಮಾಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.

ಸಂಪುಟ ಸಭೆಯ ಇತರ ಪ್ರಮುಖ ನಿರ್ಧಾರಗಳು ಮತ್ತು ಯೋಜನೆಗಳು:

ಕ್ಯಾಬಿನೆಟ್ ಸಭೆಯಲ್ಲಿ ಕಾಂಗ್ರೆಸ್ ಭವನಗಳ ಜಾಗ ಮಂಜೂರಾತಿ ಹೊರತುಪಡಿಸಿ ಹಲವು ಮಹತ್ವದ ಯೋಜನೆಗಳು ಮತ್ತು ನಿರ್ಣಯಗಳಿಗೆ ಅನುಮೋದನೆ ದೊರೆತಿದೆ.

ಗಂಗಾ ಕಲ್ಯಾಣ ಯೋಜನೆ: ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಮಾಡುವ ಹೊಣೆಯನ್ನು ಉಸ್ತುವಾರಿ ಸಚಿವರ ಹೆಗಲಿಗೆ ವಹಿಸಲಾಗಿದೆ.

ಗುತ್ತಿಗೆದಾರರ ಅವಧಿ ವಿಸ್ತರಣೆ: ಹಳೆಯ ಗುತ್ತಿಗೆದಾರರ ಅವಧಿಯನ್ನು 2 ವರ್ಷಗಳ ಕಾಲ ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ.

ಕೃಷಿ ಮತ್ತು ಕಡಲ ಯೋಜನೆಗಳು:

ಕೆ-ಶೋರ್ ಯೋಜನೆಯಡಿ 20.47 ಕೋಟಿ ವೆಚ್ಚದ ಹಣ ಬಿಡುಗಡೆ.

ಕರಾವಳಿಯಲ್ಲಿರುವ 4 ಹಾಲಿ ಬಂದರುಗಳ ಖಾಸಗಿ ಸಹಭಾಗಿತ್ವದಲ್ಲಿ ದುರಸ್ತಿಗೆ ಒಪ್ಪಿಗೆ ನೀಡಲಾಗಿದ್ದು, ಇದಕ್ಕಾಗಿ 40.12 ಕೋಟಿ ವೆಚ್ಚಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.

ಶಿಕ್ಷಣ ಮತ್ತು ತಂತ್ರಜ್ಞಾನ:

ರಾಜ್ಯಾದ್ಯಂತ 360 ಕೋಟಿ ರೂ ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುಮೋದನೆ.

ರಾಜ್ಯದಲ್ಲಿ 8 ಕಡೆಗಳಲ್ಲಿ ಟೆಕ್ನಾಲಜಿ ಬ್ಯುಸಿನೆಸ್ ಇನ್‌ಕ್ಯೂಬೇಟರ್ಸ್ ಸ್ಥಾಪನೆಗೆ ಒಪ್ಪಿಗೆ.

ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ 23 ಕೋಟಿ ಅನುದಾನ ಮಂಜೂರು.

ಇತರೆ ಮಂಜೂರಾತಿಗಳು:

ಅರಣ್ಯ ಇಲಾಖೆಯಲ್ಲಿ ತಾಂತ್ರಿಕ ಹಾಗೂ ನಿರ್ವಹಣೆ ಸೇವೆಗಳಿಗೆ ಒಪ್ಪಿಗೆ.

ಪೊಲೀಸ್ ಇಲಾಖೆಗೆ ವಾಹನ ಖರೀದಿಗೆ 34 ಕೋಟಿ ಅನುದಾನ.

ಕೋಲಾರದಲ್ಲಿ 150 ಟನ್‌ಗಳ ಸಾಮರ್ಥ್ಯದ ಹಸಿ ತ್ಯಾಜ ಘಟಕಕ್ಕೆ ಒಪ್ಪಿಗೆ.

ಗೇಲ್ (GAIL) ಸಂಸ್ಥೆಗೆ 9 ಎಕರೆ 38 ಗುಂಟೆ ಜಾಗವನ್ನು 25 ವರ್ಷಗಳ ಅವಧಿಗೆ ಗುತ್ತಿಗೆ ಮೇಲೆ ನೀಡಲು ಸಮ್ಮತಿ.

ಬನಶಂಕರಿಯಲ್ಲಿರುವ ವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ 602 ಚದುರ ಅಡಿ ನಿವೇಶನ ಮಂಜೂರು.

ಶಹಾಪುರ ನಗರಸಭೆಯಲ್ಲಿ ಕನಕಭವನ ನಿರ್ಮಾಣಕ್ಕೆ 300 ಚದರ ಮೀಟರ್ ಜಾಗ ಮಂಜೂರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !