March 14, 2026
Saturday, March 14, 2026
spot_img

ಪಾಕಿಸ್ತಾನದ ವಕ್ತಾರರಂತೆ ಕಾಂಗ್ರೆಸ್ ಮಾತನಾಡುತ್ತಿದೆ: ಲೋಕಸಭೆಯಲ್ಲಿ ಮೋದಿ ಚಾಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯಲ್ಲಿ ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ್ ಕುರಿತಾದ ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್​ ವಿರುದ್ಧ ಚಾಟಿ ಬೀಸಿದರು.

ರಾಹುಲ್ ಗಾಂಧಿಯವರ ಪಕ್ಷ ಮತ್ತು ಅದರ ಮಿತ್ರಪಕ್ಷಗಳು ಭಾರತ ಮತ್ತು ಅದರ ಸೇನೆಯ ವಿರುದ್ಧ ಪಾಕಿಸ್ತಾನದ ತಪ್ಪು ಮಾಹಿತಿ ಅಭಿಯಾನಕ್ಕೆ ಬಲಿಯಾಗಿದ್ದಲ್ಲದೆ, ಅವರ ವಕ್ತಾರರಂತೆ ಈ ಸುದ್ದಿಯನ್ನು ಹಬ್ಬಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ನಡೆಸಿದ ತಕ್ಷಣ ಕಾಂಗ್ರೆಸ್ ಪುರಾವೆ ಕೇಳಿತು. ಸೈನ್ಯವನ್ನು ಅಪಖ್ಯಾತಿಗೊಳಿಸಲು ಸಾಧ್ಯವಾಗದಿದ್ದಾಗ, ಅವರು ತಮ್ಮ ಅಧಿಕಾರಾವಧಿಯಲ್ಲಿ ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸಿದ್ದೇವೆ ಎಂದು ಹೇಳಿಕೊಂಡು ತಮ್ಮ ರಾಗ ಬದಲಾಯಿಸಿದರು.

ಒಬ್ಬ ಕಾಂಗ್ರೆಸ್ ನಾಯಕ ಮೂರು ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸಿದ್ದೇವೆ ಎಂದು ಹೇಳಿದ್ದರು. ಅವರಿಗಿಂತ ಮೇಲಿದ್ದ ನಾಯಕ ಆರು ಸರ್ಜಿಕಲ್‌ ಸ್ಟ್ರೈಕ್‌ ಮಾಡಿದ್ದೇವೆ ಎಂದು ಹೇಳಿದ್ದರು. ಅದಕ್ಕೂ ಮೇಲಿದ್ದ ನಾಯಕ 15 ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸಿದ್ದೇವೆ ಎಂದು ಹೇಳಿದ್ದರು. ಎಷ್ಟು ಮೇಲಿನ ನಾಯಕ ಇರುತ್ತಾರೋ ಸಂಖ್ಯೆಗಳು ಅಷ್ಟು ಏರುತ್ತಿದ್ದವು ಎಂದು ಪ್ರಧಾನಿ ಮೋದಿ ಹೇಳಿದರು.

ಬಳಿಕ ಭಾರತ ಬಾಲಕೋಟ್ ವಾಯುದಾಳಿ ನಡೆಸಿದ ಸಮಯ ಪಾಕಿಸ್ತಾನದಂತೆಯೇ ಕಾಂಗ್ರೆಸ್ ಕೂಡ ಛಾಯಾಚಿತ್ರ ಸಾಕ್ಷ್ಯಗಳನ್ನು ಕೇಳಲು ಪ್ರಾರಂಭಿಸಿತು.

ಮತ್ತೆ “ಪೈಲಟ್ ಅಭಿನಂದನ್ ಸೆರೆಹಿಡಿಯಲ್ಪಟ್ಟಾಗ, ಪಾಕಿಸ್ತಾನ ಸಂತೋಷಪಡುವುದು ಸಹಜ. ಆದರೆ ಇಲ್ಲಿಯೂ ಸಹ, ಕಾಂಗ್ರೆಸ್‌ನೊಳಗಿನ ಕೆಲವರು, ‘ಈಗ ಮೋದಿ ಸಿಕ್ಕಿಬಿದ್ದಿದ್ದಾರೆ… ಅವರು ಅಭಿನಂದನ್ ಅವರನ್ನು ಹೇಗೆ ಮರಳಿ ತರುತ್ತಾರೆ ಎಂದು ನೋಡೋಣ’ ಎಂದು ಹೇಳುತ್ತಿದ್ದರು. ಆದರೆ, ಅಭಿನಂದನ್ ಅವರನ್ನು ಮರಳಿ ಕರೆತರಲಾಯಿತು,” ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ಮೋದಿ ಮೋದಿ ಎಂದು ಘೋಷಣೆ ಕೂಗಿದರು.

ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತ ತನ್ನ ಕ್ರಮಗಳು ಉಲ್ಬಣಗೊಳ್ಳದ ಸ್ವರೂಪದ್ದಾಗಿದ್ದು, ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯವನ್ನು ಮಾತ್ರ ಗುರಿಯಾಗಿರಿಸಿಕೊಂಡಿದ್ದವು ಎಂಬ ತನ್ನ ನಿಲುವನ್ನು ಆರಂಭದಿಂದಲೇ ಸ್ಪಷ್ಟಪಡಿಸಿತ್ತು ಎಂದು ಪ್ರಧಾನಿ ಮೋದಿ ಸಮರ್ಥಿಸಿಕೊಂಡರು. “ಅದಕ್ಕಾಗಿಯೇ ನಾವು ದಾಳಿಯನ್ನು ನಿಲ್ಲಿಸಿದ್ದೇವೆ” ಎಂದು ಅವರು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !