February 3, 2026
Tuesday, February 3, 2026
spot_img

ರೈತರಿಗೆ ಡಬಲ್ ರಕ್ಷಣೆ: ಕಾಡು ಪ್ರಾಣಿ ದಾಳಿ, ಭತ್ತ ಮುಳುಗಡೆ ಈಗ PMFBY ವ್ಯಾಪ್ತಿಯಲ್ಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೈತ ಸಮುದಾಯದ ಬಹುಕಾಲದ ಬೇಡಿಕೆಯನ್ನು ಕೇಂದ್ರ ಸರ್ಕಾರವು ಮಾನ್ಯ ಮಾಡಿದ್ದು, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸಿದೆ. ಇನ್ನು ಮುಂದೆ, ಕಾಡು ಪ್ರಾಣಿಗಳ ದಾಳಿಯಿಂದ ಬೆಳೆಗಳಿಗೆ ನಷ್ಟ ಸಂಭವಿಸಿದರೆ ವಿಮಾ ಪರಿಹಾರ ಸಿಗಲಿದೆ.

ಈ ಹೊಸ ಮಾರ್ಪಾಡಿನಡಿಯಲ್ಲಿ, ಕಾಡಾನೆಗಳು, ಮಂಗಗಳು ಮತ್ತು ಇತರೆ ಕಾಡು ಪ್ರಾಣಿಗಳ ದಾಳಿಯಿಂದಾಗುವ ಬೆಳೆ ಹಾನಿಯನ್ನು ಸ್ಥಳೀಯ ಅಪಾಯಗಳ ಪಟ್ಟಿಗೆ ಸೇರಿಸಲಾಗಿದೆ. ಇದು ಪಿಎಂ ಫಸಲ್ ಬಿಮಾ ಯೋಜನೆಯ ಅಪಾಯಗಳ ಪಟ್ಟಿಗೆ ಮಾಡಲಾದ ಐದನೇ ಪ್ರಮುಖ ಸೇರ್ಪಡೆಯಾಗಿದೆ.

ಪ್ರವಾಹ ಪೀಡಿತರಿಗೆ ನೆಮ್ಮದಿ: ಭತ್ತ ಮುಳುಗಡೆ ಮತ್ತೆ ಸೇರ್ಪಡೆ!

ಸ್ಥಳೀಕೃತ ವಿಪತ್ತು ಅಪಾಯಗಳ ಪಟ್ಟಿಯಿಂದ 2018ರಲ್ಲಿ ತೆಗೆದುಹಾಕಲಾಗಿದ್ದ ಭತ್ತ ಮುಳುಗಡೆ ಅಪಾಯವನ್ನು ಸರ್ಕಾರವು ಮರುಸೇರ್ಪಡೆಗೊಳಿಸಿದೆ. ಇದರಿಂದಾಗಿ, ಕರ್ನಾಟಕ ಸೇರಿದಂತೆ ದೇಶದ ಪ್ರವಾಹಪೀಡಿತ ರಾಜ್ಯಗಳಲ್ಲಿ ಭತ್ತ ಬೆಳೆಯುವ ರೈತರಿಗೆ ವಿಪತ್ತಿನ ಸಮಯದಲ್ಲಿ ಇದು ದೊಡ್ಡ ಸಮಾಧಾನ ನೀಡುವ ನಿರೀಕ್ಷೆಯಿದೆ.

ರಾಜ್ಯ ಸರ್ಕಾರದ ಮುಂದಿನ ಕ್ರಮಗಳು:

ಯಾವ ನಿರ್ದಿಷ್ಟ ಕಾಡು ಪ್ರಾಣಿಗಳಿಂದ ಬೆಳೆ ನಷ್ಟವಾದರೆ ಪರಿಹಾರ ನೀಡಬೇಕು ಮತ್ತು ಯಾವ ಜಿಲ್ಲೆಗಳು ಪ್ರವಾಹ ಸೂಕ್ಷ್ಮವಾಗಿವೆ ಎಂಬ ಬಗ್ಗೆ ಪರಿಶೀಲಿಸಿ ರಾಜ್ಯ ಸರ್ಕಾರಗಳು ಶೀಘ್ರದಲ್ಲೇ ಒಂದು ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲಿವೆ.

ಜಾರಿ ದಿನಾಂಕ:
PMFBY ನಲ್ಲಿ ಮಾಡಲಾದ ಈ ಎಲ್ಲ ಮಹತ್ವದ ಮಾರ್ಪಾಡುಗಳು 2026ರ ಮುಂಬರುವ ಬೇಸಿಗೆ ಹಂಗಾಮಿನಿಂದ ಜಾರಿಗೆ ಬರಲಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !