January19, 2026
Monday, January 19, 2026
spot_img

IND vs NZ | ತವರಿನಲ್ಲಿ ಕೈಜಾರಿದ ಏಕದಿನ ಸರಣಿ: ಸೋಲಿನ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್ ಗಿಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಕೈ ತಪ್ಪಿದ ಬಳಿಕ, ಭಾರತ ತಂಡದ ನಾಯಕ ಶುಭ್ಮನ್ ಗಿಲ್ ಸೋಲಿನ ಕಾರಣಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇಂದೋರ್‌ನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಸೋಲು ಕಂಡ ನಂತರ ತಂಡದ ಪ್ರದರ್ಶನವನ್ನು ಆತ್ಮಪರಿಶೀಲನೆ ಮಾಡುವ ಅಗತ್ಯವಿದೆ ಎಂದು ಗಿಲ್ ಒಪ್ಪಿಕೊಂಡಿದ್ದಾರೆ.

ಸರಣಿಯ ಮೊದಲ ಪಂದ್ಯ ಗೆದ್ದ ಬಳಿಕ, 1–1 ಸಮಬಲಕ್ಕೆ ತಲುಪಿದ್ದ ಸಂದರ್ಭದಲ್ಲೇ ತಂಡದ ಆಟದಲ್ಲಿ ಸ್ಥಿರತೆ ಕಾಣಿಸಲಿಲ್ಲ ಎಂದು ಗಿಲ್ ಹೇಳಿದರು. ವಡೋದರಾ ಹಾಗೂ ಇಂದೋರ್ ಪಂದ್ಯಗಳಲ್ಲಿ ನಿರೀಕ್ಷಿತ ಮಟ್ಟದ ಆಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ ಎಂಬುದು ನಿರಾಸೆ ತಂದಿದೆ ಎಂದರು. “ನಮ್ಮ ಆಟದಲ್ಲಿ ಇನ್ನಷ್ಟು ಸುಧಾರಣೆ ಅಗತ್ಯವಿರುವ ಕ್ಷೇತ್ರಗಳಿವೆ. ನಾವು ಅದನ್ನು ಸ್ಪಷ್ಟವಾಗಿ ಗಮನಿಸಿದ್ದೇವೆ” ಎಂದರು.

ಆದರೆ ಈ ಸೋಲಿನ ನಡುವೆಯೂ ಸಕಾರಾತ್ಮಕ ಅಂಶಗಳನ್ನು ಗಿಲ್ ಮುಂದಿಟ್ಟರು. ವಿರಾಟ್ ಕೊಹ್ಲಿಯ ಶತಕವನ್ನು ಶ್ಲಾಘಿಸಿದ ಅವರು, “ಒತ್ತಡದ ಪರಿಸ್ಥಿತಿಯಲ್ಲೂ ಕೊಹ್ಲಿ ಆಡಿದ ಇನಿಂಗ್ಸ್ ಅತ್ಯುತ್ತಮವಾಗಿತ್ತು” ಎಂದರು. ಜೊತೆಗೆ ಕೆಳಕ್ರಮಾಂಕದಲ್ಲಿ ಹರ್ಷಿತ್ ರಾಣಾ ತೋರಿದ ಹೋರಾಟವನ್ನೂ ಮೆಚ್ಚಿದರು. “ಎಂಟನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ರಾಣಾ ತೋರಿದ ಧೈರ್ಯ ತಂಡಕ್ಕೆ ದೊಡ್ಡ ಬಲವಾಗಿದೆ” ಎಂದು ಹೇಳಿದರು.

ನಿತೀಶ್ ಕುಮಾರ್ ರೆಡ್ಡಿಗೆ ನಿರಂತರ ಅವಕಾಶ ನೀಡುತ್ತಿರುವುದರ ಹಿಂದಿನ ಉದ್ದೇಶವನ್ನು ವಿವರಿಸಿದ ಗಿಲ್, ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಸೂಕ್ತ ಸಂಯೋಜನೆ ಹುಡುಕುವುದು ನಮ್ಮ ಗುರಿ ಎಂದು ಸ್ಪಷ್ಟಪಡಿಸಿದರು.

Must Read

error: Content is protected !!