March 12, 2026
Thursday, March 12, 2026
spot_img

ಬೈರತಿ ಬಸವರಾಜ್​ಗೆ ನ್ಯಾಯಾಂಗ ಬಂಧನವೋ, ಪೊಲೀಸ್ ಕಸ್ಟಡಿಯೋ? ನಾಳೆ ಫೈನಲ್‌ ಡಿಶಿಷನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಕೇಸ್‌ಗೆ ಸಂಬಂಧಿಸದಿಂತೆ ಐದನೇ ಆರೋಪಿಯಾಗಿ ಬಂಧನಕ್ಕೆ ಒಳಗಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಪೊಲೀಸ್‌ ಕಸ್ಟಡಿಯೋ ಅಥವಾ ನ್ಯಾಯಾಂಗ ಬಂಧನವೋ ಎನ್ನುವುದು ಗೊತ್ತಾಗಲಿದೆ.

ಬೈರತಿ ಬಸವರಾಜ್​ಗೆ ಸೂಕ್ತ ಚಿಕಿತ್ಸೆ ಕೊಡಿಸಿದ ಬಳಿಕ ನಾಳೆ ಹಾಜರುಪಡಿಸುವಂತೆ 42ನೇ ಎಸಿಜೆಎಂ ನ್ಯಾಯಾಲಯ ಸಿಐಡಿಗೆ ಸೂಚಿಸಿದೆ.

ನಾಳೆ ತಿಂಗಳ ಎರಡನೇ ಶನಿವಾರ ರಜೆಯಾಗಿದ್ದು, ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ತಮ್ಮ ಮನೆಗೆ ಆರೋಪಿಯನ್ನ ಹಾಜರುಪಡಿಸುವಂತೆ ಕೋರ್ಟ್ ತಿಳಿಸಿದೆ. ಬೈರತಿ ಬಸವರಾಜ್​ಗೆ ನ್ಯಾಯಾಂಗ ಬಂಧನವೋ ಅಥವಾ ಪೊಲೀಸ್ ಕಸ್ಟಡಿಯೋ? ಎಂಬ ಭೀತಿ ಕಾಡಿದ್ದು, ನಾಳೆ ಇದಕ್ಕೆ ಉತ್ತರ ಸಿಗಲಿದೆ.

ನಿರೀಕ್ಷಣಾ ಜಾಮೀನು ರದ್ದಾಗುತ್ತಿದ್ದಂತೆ ನಿನ್ನೆ ಗುಜರಾತ್​ನ ಅಹಮದಾಬಾದ್​ನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ವಶಕ್ಕೆ ಪಡೆಯಲಾಗಿತ್ತು. ತನಿಖಾಧಿಕಾರಿ ಡಿವೈಎಸ್ಪಿ ಗೌತಮ್ ಅವರು ಆರೋಪಿಯನ್ನ ವಿಚಾರಣೆ ನಡೆಸಿ, ಬಂಧನ ಪ್ರಕ್ರಿಯೆ ನಡೆಸಿದರು. ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !