ಹೊಸದಿಗಂತ ಡಿಜಿಟಲ್ ಡೆಸ್ಕ್:
ತಲೆಗೆ 1 ಕೋಟಿ ರೂ. ಬಹುಮಾನವನ್ನು ಘೋಷಿಸಲಾಗಿದ್ದ ಉನ್ನತ ಮಾವೋವಾದಿ ಕಮಾಂಡರ್ ‘ತಂತ್ರಜ್ಞ’ ತಿಪ್ಪಿರಿ ತಿರುಪತಿ ಅಲಿಯಾಸ್ ದೇವ್ಜಿ ತೆಲಂಗಾಣ ಪೊಲೀಸರ ಮುಂದೆ ಶರಣಾಗಿದ್ದಾರೆ.
ದೇವ್ಜಿ ಜೊತೆ ಮತ್ತೊಬ್ಬ ಹಿರಿಯ ಮಾವೋವಾದಿ ನಾಯಕ ಮಲ್ಲ ರಾಜಿ ರೆಡ್ಡಿ ಮತ್ತು ಸಿಪಿಐ-ಮಾವೋವಾದಿಯ ಹಲವಾರು ಕಾರ್ಯಕರ್ತರು ಸಹ ಶರಣಾಗಿದ್ದಾರೆ.
ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯವರಾಗಿದ್ದ ದೇವ್ಜಿ , ಮೇ 2025 ರಲ್ಲಿ ನಿಧನರಾಗಿದ್ದ ಮಾವೋವಾದಿ ಪ್ರಧಾನ ಕಾರ್ಯದರ್ಶಿ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು ಎಂಬವರ ಉತ್ತರಾಧಿಕಾರಿಯಾಗಿದ್ದರು .
ಒಂದೆರಡು ದಿನಗಳಲ್ಲಿ ಶರಣಾಗತಿಯಾದವರು ಅಧಿಕೃತವಾಗಿ ತೋರಿಸಲಾಗುವುದು. ಸದ್ಯ ತೆಲಂಗಾಣ ಪೊಲೀಸರ ವಶಲ್ಲಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.



