ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ವಿಧಾನಸಭಾ ಚುನಾವಣಾ ಕಣದಲ್ಲಿ ಕಮಲ ಅರಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ರಣಕಹಳೆ ಮೊಳಗಿಸಿದ್ದಾರೆ. ಪಾಲಕ್ಕಾಡ್ನಲ್ಲಿ ನಡೆದ ಬೃಹತ್ ರಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಆಡಳಿತಾರೂಢ ಎಲ್ಡಿಎಫ್ ಮತ್ತು ಪ್ರತಿಪಕ್ಷ ಯುಡಿಎಫ್ ಮೈತ್ರಿಕೂಟಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ದಶಕಗಳಿಂದ ನಡೆಯುತ್ತಿರುವ ಎಲ್ಡಿಎಫ್ ಮತ್ತು ಯುಡಿಎಫ್ ಮೈತ್ರಿಕೂಟಗಳ ಸರಣಿ ಹಗರಣಗಳನ್ನು ಒಂದೊಂದಾಗಿ ಬಯಲಿಗೆಳೆಯಲಾಗುವುದು” ಎಂದು ಮೋದಿ ಎಚ್ಚರಿಸಿದ್ದಾರೆ.
ಎನ್ಡಿಎ ಮೈತ್ರಿಕೂಟದ ಮೇಲೆ ಕೇರಳದ ಜನತೆ ಇಟ್ಟಿರುವ ನಂಬಿಕೆ ಇಂದು ಸಾಬೀತಾಗಿದೆ. ಪಾಲಕ್ಕಾಡ್ನಲ್ಲಿ ನೆರೆದಿರುವ ಜನರ ಈ ಅಭೂತಪೂರ್ವ ಬೆಂಬಲ ಕೇವಲ ಪ್ರಚಾರವಲ್ಲ, ಇದೊಂದು ರಾಜಕೀಯ ಚಳವಳಿಯಾಗಿ ಬದಲಾಗಿದೆ ಎಂದು ಅವರು ಬಣ್ಣಿಸಿದರು.
ಕೇರಳದ ಅಭಿವೃದ್ಧಿಗಾಗಿ ಯುವಕರು, ಮಹಿಳೆಯರು ಹಾಗೂ ರೈತರು ಇಂದು ಬಿಜೆಪಿ ಮತ್ತು ಎನ್ಡಿಎ ಬೆನ್ನಿಗೆ ನಿಂತಿದ್ದಾರೆ. ಈ ಬೆಂಬಲವೇ ರಾಜ್ಯದಲ್ಲಿ ದೊಡ್ಡ ಬದಲಾವಣೆಗೆ ಮುನ್ನುಡಿ ಬರೆಯಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.
ಕೇರಳದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಇಷ್ಟೊಂದು ದೊಡ್ಡ ಮಟ್ಟದ ಜನಬೆಂಬಲ ಪಡೆಯುತ್ತಿದ್ದು, ಪ್ರಧಾನಿಯವರ ಭೇಟಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ.



