February 1, 2026
Sunday, February 1, 2026
spot_img

ಹಳೆಯ ಬೇರು, ಹೊಸ ಚಿಗುರು: ಪುರಾತತ್ವ ತಾಣಗಳ ಪುನರುತ್ಥಾನಕ್ಕೆ ಸೀತಾರಾಮನ್ ಮಾಸ್ಟರ್ ಪ್ಲಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಆಧುನಿಕತೆಯೊಂದಿಗೆ ಬೆಸೆಯುವ ಮಹತ್ವದ ಯೋಜನೆಯನ್ನು ಪ್ರಕಟಿಸಿದ್ದಾರೆ. ಇದರ ಪ್ರಮುಖ ಅಂಶಗಳು ಇಲ್ಲಿವೆ:

ಸಾರನಾಥ ಮತ್ತು ಹಸ್ತಿನಾಪುರದಂತಹ ಐತಿಹಾಸಿಕ ಮಹತ್ವವುಳ್ಳ 15 ಪ್ರಮುಖ ಪುರಾತತ್ವ ತಾಣಗಳನ್ನು ಅತ್ಯಾಧುನಿಕ ‘ಸಾಂಸ್ಕೃತಿಕ ಹಬ್’ ಗಳಾಗಿ ಅಭಿವೃದ್ಧಿಪಡಿಸಲಾಗುವುದು.

ದೇಶದ ಪ್ರಮುಖ ಪರಂಪರೆಯ ತಾಣಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ಅವುಗಳ ದಾಖಲೀಕರಣಕ್ಕಾಗಿ ವಿಶೇಷ ಡಿಜಿಟಲ್ ಜ್ಞಾನ ಜಾಲವನ್ನು ಸ್ಥಾಪಿಸಲಾಗುವುದು.

ಈ ಯೋಜನೆಯಲ್ಲಿ ಸ್ಥಳೀಯ ಸಂಶೋಧಕರು, ಇತಿಹಾಸಕಾರರು ಮತ್ತು ತಾಂತ್ರಿಕ ಪಾಲುದಾರರಿಗೆ ಹೊಸ ಉದ್ಯೋಗಾವಕಾಶ ಹಾಗೂ ಪ್ರಮುಖ ಪಾತ್ರಗಳನ್ನು ನೀಡಲಾಗುವುದು.

ಈ ತಾಣಗಳ ಸುತ್ತ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ ಆರ್ಥಿಕತೆಯನ್ನು ಬಲಪಡಿಸುವುದು ಸರ್ಕಾರದ ಗುರಿಯಾಗಿದೆ.

ಕ್ರೀಡೆಯನ್ನು ತಳಮಟ್ಟದಿಂದಲೇ ಪ್ರೋತ್ಸಾಹಿಸಲು ‘ಖೇಲೋ ಇಂಡಿಯಾ’ ಮಿಷನ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದು ಯುವಜನತೆಯ ಅಭಿವೃದ್ಧಿ ಮತ್ತು ಹೊಸ ಉದ್ಯೋಗಾವಕಾಶಗಳ ಸೃಷ್ಟಿಗೆ ಪೂರಕವಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !