ಹೊಸದಿಗಂತ ವರದಿ ಕುಶಾಲನಗರ:
ದ್ವಿಚಕ್ರ ವಾಹನ ಡಿಕ್ಕಿಯಾಗಿ ಪಾದಚಾರಿ ಸಾವಿಗೀಡಾದ ಘಟನೆ ಇಲ್ಲಿಗೆ ಸಮೀಪದ ಕೂಡುಮಂಗಳೂರಿನಲ್ಲಿ ನಡೆದಿದೆ.
ಹಳೆ ಕೂಡಿಗೆ ನಿವಾಸಿ ರಂಜಿತ್ (24) ಮೃತ ಯುವಕ. ಬೈಕ್ ನಲ್ಲಿದ್ದ ಸುಂದರನಗರದ ಯುವಕರಾದ ಪ್ರಭು ಮತ್ತು ಕಾರ್ತಿಕ್ ಎಂಬವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರು ಹಾಗೂ ಮಡಿಕೇರಿಯ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.



