Saturday, January 10, 2026

I-PAC ಮೇಲೆ ಇಡಿ ದಾಳಿ ಖಂಡಿಸಿ ಅಮಿತ್ ಶಾ ಕಚೇರಿ ಹೊರಗೆ ಪ್ರತಿಭಟನೆ: ಟಿಎಂಸಿ ಸಂಸದರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಕೀಯ ಸಲಹಾ ಸಂಸ್ಥೆ I-PACಯ ಕೋಲ್ಕತ್ತಾ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿದ ದಾಳಿಯನ್ನು ವಿರೋಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಹಲವಾರು ತೃಣಮೂಲ ಕಾಂಗ್ರೆಸ್ ಸಂಸದರನ್ನು ದೆಹಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ನಿನ್ನೆ ನಡೆದ ದಾಳಿಯ ಸಮಯದಲ್ಲಿ ಮಮತಾ ಬ್ಯಾನರ್ಜಿ ಅವರ ಹಸ್ತಕ್ಷೇಪದಿಂದ ಉಂಟಾದ ಉದ್ವಿಗ್ನತೆಯ ನಡುವೆಯೇ ಈ ಪ್ರತಿಭಟನೆ ನಡೆದಿದೆ.

ಚುನಾವಣೆಗೆ ಮುನ್ನ ವಿರೋಧ ಪಕ್ಷಗಳನ್ನು ಬೆದರಿಸಲು ಬಿಜೆಪಿ ನೇತೃತ್ವದ ಸರ್ಕಾರವು ಕೇಂದ್ರ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿ ಡೆರೆಕ್ ಒ’ಬ್ರೇನ್, ಮಹುವಾ ಮೊಯಿತ್ರಾ, ಸತಾಬ್ದಿ ರಾಯ್ ಮತ್ತು ಕೀರ್ತಿ ಆಜಾದ್ ಸೇರಿದಂತೆ ಟಿಎಂಸಿ ಸಂಸದರು ಘೋಷಣೆಗಳನ್ನು ಕೂಗಿದರು.

ಅಲ್ಲಿಗೆ ಆಗಮಿಸಿದ ಪೊಲೀಸರು ಸಂಸದರನ್ನು ಎತ್ತಿಕೊಂಡು ವ್ಯಾನ್‌ಗಳಲ್ಲಿ ಕರೆದೊಯ್ದರು. ಡೆರೆಕ್ ಒ’ಬ್ರೇನ್ ಅವರನ್ನು ಎಳೆದುಕೊಂಡು ಹೋಗುವಾಗ, ಇಲ್ಲಿ ಸಂಸದರಿಗೆ ಏನಾಗುತ್ತಿದೆ ಎಂದು ನೀವು ನೋಡುತ್ತಿದ್ದೀರಿ ಎಂದು ಹೇಳಿದರೆ, ಮಹುವಾ ಮೊಯಿತ್ರಾ, ನಾವು ಬಿಜೆಪಿಯನ್ನು ಸೋಲಿಸುತ್ತೇವೆ. ದೆಹಲಿ ಪೊಲೀಸರು ಚುನಾಯಿತ ಸಂಸದರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದನ್ನು ದೇಶ ನೋಡುತ್ತಿದೆ ಎಂದು ಹೇಳಿದರು.

error: Content is protected !!