January17, 2026
Saturday, January 17, 2026
spot_img

ಮಳೆರಾಯನ ಮಧ್ಯಪ್ರವೇಶ: ಐದನೇ ಟಿ20 ರದ್ದು, ಟೀಂ ಇಂಡಿಯಾ ಮುಡಿಗೆ ಸರಣಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐದು ಪಂದ್ಯಗಳ ರೋಚಕ ಟಿ20 ಸರಣಿಯಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಸರಣಿಯ ನಿರ್ಣಾಯಕ ಹಾಗೂ ಅಂತಿಮ ಪಂದ್ಯ ಮಳೆಯ ಕಾರಣದಿಂದ ರದ್ದಾಯಿತು.

ಮಳೆರಾಯನ ಅಡ್ಡಿಪಡಿಸುವಿಕೆಯ ನಡುವೆಯೂ, ಸೂರ್ಯಕುಮಾರ್ ಯಾದವ್ ನೇತೃತ್ವದ ಯುವ ಭಾರತ ತಂಡವು ಸರಣಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಪಂದ್ಯದ ಸಂಕ್ಷಿಪ್ತ ನೋಟ:

ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿಯೇ ಮಳೆ ಸುರಿದ ಕಾರಣ ಪಂದ್ಯ ತಡವಾಗಿ ಶುರುವಾಯಿತು. ಬ್ಯಾಟಿಂಗ್ ಆರಂಭಿಸಿದ ಭಾರತೀಯ ಬ್ಯಾಟರ್‌ಗಳು ಬಿರುಸಿನ ಆಟವಾಡಿದರು. ಕೇವಲ 4.5 ಓವರ್‌ಗಳಲ್ಲಿ 52 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದರು.

ಓಪನರ್ ಅಭಿಷೇಕ್ ಶರ್ಮಾ 23 ರನ್ ಗಳಿಸಿದರೆ, ಮತ್ತೊಬ್ಬ ಓಪನರ್ ಶುಭಮನ್ ಗಿಲ್ 29 (ಔಟಾಗದೆ) ರನ್ ಗಳಿಸಿ ಸ್ಫೋಟಕ ಆಟಕ್ಕೆ ಮುನ್ನುಡಿ ಬರೆದಿದ್ದರು.

ಆದರೆ, ಮತ್ತೆ ಮಳೆ ಬಲವಾಗಿ ಸುರಿಯಲು ಆರಂಭಿಸಿತು. ಮಳೆ ನಿಲ್ಲುವ ಲಕ್ಷಣ ಕಾಣದಿದ್ದರಿಂದ, ಪಂದ್ಯವನ್ನು ಅಂತಿಮವಾಗಿ ರದ್ದುಗೊಳಿಸಲಾಯಿತು. ಇದರಿಂದ ಸರಣಿ ಗೆಲುವು ಈಗಾಗಲೇ ಮೂರು ಹಾಗೂ ನಾಲ್ಕನೇ ಪಂದ್ಯಗಳನ್ನು ಗೆದ್ದಿದ್ದ ಟೀಂ ಇಂಡಿಯಾದ ಪಾಲಾಯಿತು.

ಪ್ರಶಸ್ತಿ ಪ್ರದಾನ ಮತ್ತು ಸರಣಿ ಹೀರೋ:

ಲೆಜೆಂಡರಿ ಕ್ರಿಕೆಟರ್ ಆಡಮ್ ಗಿಲ್‌ಕ್ರಿಸ್ಟ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಿಕೊಟ್ಟರು. ಈ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾ ಅವರು ‘ಸರಣಿ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು. ಅಭಿಷೇಕ್ ಐದು ಪಂದ್ಯಗಳ ಸರಣಿಯಲ್ಲಿ ಒಟ್ಟು 163 ರನ್‌ಗಳನ್ನು ಗಳಿಸಿ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು.

ಸರಣಿಯ ಫಲಿತಾಂಶ ಹೀಗಿದೆ:

ಮೊದಲ ಪಂದ್ಯ: ಮಳೆಯಿಂದ ರದ್ದು.

ಎರಡನೇ ಪಂದ್ಯ: ಆಸ್ಟ್ರೇಲಿಯಾ ಗೆಲುವು.

ಮೂರನೇ ಮತ್ತು ನಾಲ್ಕನೇ ಪಂದ್ಯ: ಭಾರತ ತಂಡಕ್ಕೆ ಜಯ.

Must Read

error: Content is protected !!