March 15, 2026
Sunday, March 15, 2026
spot_img

ಕಾಂಗ್ರೆಸ್ ತಲೆಗೆ ಬಂದೂಕಿಟ್ಟು ಸಿಎಂ ಅಭ್ಯರ್ಥಿ ಘೋಷಿಸಿದ ಆರ್‌ಜೆಡಿ: ಬಿಹಾರದಲ್ಲಿ ಪ್ರಧಾನಿ ಮೋದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇಡೀ ದೇಶವೇ ಆಪರೇಷನ್‌ ಸಿಂದೂರದ ಯಶಸ್ಸಿನ ನಂತರ ಸೇನೆ ಪಡೆಗಳ ಬಗ್ಗೆ ಹೆಮ್ಮೆಪಡುತ್ತದೆ, ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅದನ್ನು ಸಹಿಸಲಿಲ್ಲ ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.

ಬಿಹಾರದ ಅರಾದಲ್ಲಿ ಇಂದು ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದಲ್ಲಿ ಸ್ಫೋಟಗಳು ನಡೆದವು, ಆದರೆ ಕಾಂಗ್ರೆಸ್ ನಿದ್ದೆ ಕಳೆದು ಕೊಂಡಿತು. ಪಾಕಿಸ್ತಾನ ಮತ್ತು ಕಾಂಗ್ರೆಸ್‌ ಸಿಂದೂರದ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ ಎಂದು ಅವರು ಗಾಂಧಿ ಕುಟುಂಬದ ಮೇಲೆ ಕಟುವಾದ ದಾಳಿ ನಡೆಸಿದರು.

ಆರ್‌ಜೆಡಿ ಮತ್ತು ಕಾಂಗ್ರೆಸ್ ನಡುವಿನ ಜಗಳ ತೀವ್ರಗೊಂಡಿದೆ. ಆರ್​ಜೆಡಿಯು ಕಾಂಗ್ರೆಸ್ ತಲೆಗೆ ಬಂದೂಕಿಟ್ಟು ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಘೋಷಿಸುವಂತೆ ಮಾಡಿದೆ ಎಂದುವಾಗ್ದಾಳಿ ನಡೆಸಿದರು.

ಮಹಾಘಟಬಂಧನ್ ವಿರುದ್ಧ ತಮ್ಮ ದಾಳಿಯನ್ನು ಮುಂದುವರೆಸಿದ ಪ್ರಧಾನಿ, ಕಾಂಗ್ರೆಸ್ ಮತ್ತು ಆರ್‌ಜೆಡಿ ಬಿಹಾರದ ಗುರುತನ್ನು ನಾಶಮಾಡುವ ಕೆಲಸ ಮಾಡುತ್ತಿವೆ. ಮತದಾರರು ಜಾಗರೂಕರಾಗಿರಬೇಕು ಮತ್ತು ಈ ಎರಡೂ ಪಕ್ಷಗಳ ಉದ್ದೇಶಗಳ ಬಗ್ಗೆ ತಿಳಿದಿರಬೇಕು ಎಂದು ಒತ್ತಾಯಿಸಿದರು.

ಚುನಾವಣೆಗೆ ಮೊದಲೇ ಮಹಾಘಟಬಂಧನ್ ಪಾಲುದಾರರ ನಡುವೆ ತೀವ್ರ ದ್ವೇಷವಿದ್ದು, ಚುನಾವಣೆಯ ನಂತರ ಅವರು ಪರಸ್ಪರ ವಿರುದ್ಧವಾಗಿ ತಿರುಗಿಬೀಳುವ ಸಾಧ್ಯತೆಯಿದೆ. ಎಂದರು.

ಕಾಂಗ್ರೆಸ್ ಎಂದಿಗೂ ಆರ್‌ಜೆಡಿ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಬೇಕೆಂದು ಬಯಸಿರಲಿಲ್ಲ, ಆದರೆ ಆರ್‌ಜೆಡಿ ಕಾಂಗ್ರೆಸ್‌ನತ್ತ ಬಂದೂಕು ತೋರಿಸುವ ಮೂಲಕ ಮುಖ್ಯಮಂತ್ರಿ ಹುದ್ದೆಯನ್ನು ಕಸಿದುಕೊಂಡಿತು ಮತ್ತು ತನ್ನ ಅಭ್ಯರ್ಥಿಯೇ ಮುಖ್ಯಮಂತ್ರಿ ಅಭ್ಯರ್ಥಿಯಾಗುವುದನ್ನು ಖಚಿತಪಡಿಸಿಕೊಂಡಿತು ಎಂದು ಅವರು ಹೇಳಿದರು.

ಬಿಹಾರದ ಯುವಕರು ಬಿಹಾರದಲ್ಲಿಯೇ ಇರುತ್ತಾರೆ, ಬಿಹಾರಕ್ಕೆ ಕೀರ್ತಿ ತರುವ ಕೆಲಸ ಮಾಡುತ್ತಾರೆ. ಮುಂಬರುವ ದಿನಗಳಲ್ಲಿ 1 ಕೋಟಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಾಗಿ ನಾವು ಭರವಸೆ ನೀಡಿದ್ದೇವೆ. ಇದು ಕೇವಲ ಘೋಷಣೆಯಲ್ಲ ಎಂದರು. ಅಭಿವೃದ್ಧಿ ಹೊಂದಿದ ಬಿಹಾರಕ್ಕಾಗಿ ಎನ್‌ಡಿಎ ಪ್ರಾಮಾಣಿಕ ಮತ್ತು ದೂರದೃಷ್ಟಿಯ ಪ್ರಣಾಳಿಕೆಯನ್ನು ಮಂಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !