March 4, 2026
Wednesday, March 4, 2026
spot_img

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ: ಟಿಡಿಬಿ ಮಾಜಿ ಅಧ್ಯಕ್ಷ ಪದ್ಮಕುಮಾರ್ ಗೆ ಜಾಮೀನು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿಜೈಲು ಸೇರಿದ್ದ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಅಧ್ಯಕ್ಷ ಮತ್ತು ಸಿಪಿಐ(ಎಂ) ನಾಯಕ ಎ.ಪದ್ಮಕುಮಾರ್ ಗೆ ಕೊಲ್ಲಂ ವಿಜಿಲೆನ್ಸ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಪದ್ಮಕುಮಾರ್​ ಬಂಧನವಾದ 90 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಲು ಎಸ್‌ಐಟಿ ವಿಫಲವಾದ ಕಾರಣ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.

ಈಗಾಗಲೇ ಕತ್ತಿಲಪ್ಪಲಿ ಪ್ರಕರಣದಲ್ಲಿ ಪದ್ಮಕುಮಾರ್ ಜಾಮೀನು ಪಡೆದಿದ್ದು, ಆದರೆ, ದ್ವಾರ ಫಲಕಗಳ ಚಿನ್ನ ಕದ್ದ ಪ್ರಕರಣದ ರಿಮಾಂಡ್ ಅವಧಿ ಮುಗಿಯದ ಕಾರಣ ಜೈಲಿನಲ್ಲೇ ಇದ್ದರು.

ಇದೀಗ ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ಈಗಾಗಲೇ ಬಿಡುಗಡೆಯಾದಾಗ ಉಳಿದ ಆರೋಪಿಗಳನ್ನು ಕಸ್ಟಡಿಯಲ್ಲಿ ಇಡುವುದು ನ್ಯಾಯವಲ್ಲ ಎಂದು ಕೋರ್ಟ್​ ಹೇಳಿತು.

2 ಲಕ್ಷ ರೂಪಾಯಿ ಬಾಂಡ್​​, ಇಬ್ಬರು ಸಾಕ್ಷಿದಾರರು, ರಾಜ್ಯ ಬಿಟ್ಟು ಹೋಗುವಂತಿಲ್ಲ, ಪಟ್ಟನಂತಿಟ್ಟ ಜಿಲ್ಲೆಗೆ ಪ್ರವೇಶ ನಿರ್ಬಂಧ, ವಾರಕ್ಕೆ 2 ಬಾರಿ ತನಿಖಾಧಿಕಾರಿಗಳ ಮುಂದೆ ಕಡ್ಡಾಯವಾಗಿ ಹಾಜರಾಗುವಂತೆ ಷರತ್ತು ವಿಧಿಸಲಾಗಿದೆ.

ಈ ಪ್ರಕರಣದಲ್ಲಿ ಬಂಧನದಿಂದ ಬಿಡುಗಡೆಯಾದ ಎಂಟನೇ ವ್ಯಕ್ತಿ ಪದ್ಮಕುಮಾರ್. ಚಾರ್ಜ್‌ಶೀಟ್ ಸಲ್ಲಿಸುವಲ್ಲಿನ ವಿಳಂಬವು ಮೊದಲ ಆರೋಪಿ ಮತ್ತು ಇತರ ನಾಲ್ವರು ಡೀಫಾಲ್ಟ್ ಜಾಮೀನು ಪಡೆಯಲು ಅವಕಾಶ ಮಾಡಿಕೊಟ್ಟಿತು. ಆದರೆ ದೇವಾಲಯದ ಮುಖ್ಯ ಅರ್ಚಕ ಮತ್ತು ಎ ಎಸ್ ಶ್ರೀಕುಮಾರ್ ಅವರ ರಿಮಾಂಡ್ ಅವಧಿ ಮುಗಿಯುವ ಮೊದಲು ನಿಯಮಿತ ಜಾಮೀನು ಪಡೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !