Saturday, November 22, 2025

ಧರ್ಮಸ್ಥಳದಲ್ಲಿ ‘ಸಮಾಧಿ ಶೋಧ’: ಬೋಳಿಯಾರ್ ಕಾಡಲ್ಲಿ ಪರಿಶೀಲನೆಗೆ ಮುಂದಾದ ಎಸ್ಐಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರೀ ಕುತೂಹಲ ಕೆರಳಿಸಿರುವ ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಅನಾಮಿಕನ ದೂರಿನ ಹಿನ್ನೆಲೆಯಲ್ಲಿ ಇಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದ ಬೋಳಿಯಾರು ಎಂಬಲ್ಲಿ ಗುರುತಿಸಲಾದ ಹೊಸ ಸ್ಥಳಕ್ಕೆ ಸಾಕ್ಷಿ-ದೂರುದಾರರನ್ನು ಕರೆದೊಯ್ದಿದೆ.

ಅನಾಮಿಕನ ಜೊತೆ ತನಿಖಾಧಿಕಾರಿ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಮತ್ತು ಪುತ್ತೂರು ವಿಭಾಗದ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಇದ್ದರು.

ಇಂದು 13ನೇ ಪಾಯಿಂಟ್ ನಲ್ಲಿ ಅಸ್ಥಿ ಪಂಜರಗಳ ಶೋಧ ಕಾರ್ಯಾಚರಣೆ ನಡೆಸಬೇಕಾಗಿತ್ತು. ಆದರೇ ಅದನ್ನು ಬಿಟ್ಟು ಎಸ್ಐಟಿ ಅಧಿಕಾರಿಗಳು 15ನೇ ಪಾಯಿಂಟ್ ಒಂದರಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಲ್ಲದೇ 13ನೇ ಪಾಯಿಂಟ್ ಅನ್ನು ಜಿಪಿಆರ್ ಮಾಡಲು ಎಸ್ಐಟಿ ಚಿಂತಿಸುತ್ತಿದೆ.

ಇದೀಗ 13ನೇ ಪಾಯಿಂಟ್ ನಲ್ಲಿ ಅಗೆಯುವ ಕಾರ್ಯಾಚರಣೆ ಬಿಟ್ಟು ಹೊಸದಾಗಿ 15ನೇ ಪಾಯಿಂಟ್ ಗುರುತಿಸಿದ್ದು, ಅದರಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿರುವುದು ಹಲವು ಕುತೂಹಲಕ್ಕೂ ಕಾರಣವಾಗಿದೆ. ಆ ಸ್ಥಳದಲ್ಲಿ ಅಸ್ಥಿ ಪಂಜರಗಳು ದೊರೆಯಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ.

error: Content is protected !!