January14, 2026
Wednesday, January 14, 2026
spot_img

‘ಸೂರ್ಯ ದಿ ಬ್ಯಾಟರ್ ಈಗ ಸ್ವಲ್ಪ ಕಾಣೆಯಾಗಿದ್ದಾನೆ’ ಆದ್ರೆ ಕಂಬ್ಯಾಕ್ ಖಂಡಿತ: ಸೂರ್ಯಕುಮಾರ್ ಯಾದವ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಆಫ್ರಿಕಾ ವಿರುದ್ಧ ಐದನೇ ಟಿ20 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಸರಣಿಯನ್ನು ತನ್ನದಾಗಿಸಿಕೊಂಡ ಭಾರತ ತಂಡದಲ್ಲಿ ಆತ್ಮವಿಶ್ವಾಸ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಈ ಗೆಲುವಿನ ಬಳಿಕ ನಾಯಕ ಸೂರ್ಯಕುಮಾರ್ ಯಾದವ್ ನೀಡಿದ ಪ್ರತಿಕ್ರಿಯೆ ತಂಡದ ಮನಸ್ಥಿತಿಯನ್ನು ಸ್ಪಷ್ಟಪಡಿಸುವಂತಿತ್ತು.

ಪಂದ್ಯದ ನಂತರ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ಸರಣಿಯ ಆರಂಭದಿಂದಲೇ ತಂಡ ಒಂದು ನಿರ್ದಿಷ್ಟ ಬ್ರಾಂಡ್ ಕ್ರಿಕೆಟ್ ಆಡಲು ನಿರ್ಧರಿಸಿದ್ದನ್ನು ತಿಳಿಸಿದರು. “ನಾವು ವಿಭಿನ್ನವಾಗಿ ಏನನ್ನೂ ಮಾಡಲು ಪ್ರಯತ್ನಿಸಲಿಲ್ಲ. ನಮ್ಮ ಯೋಜನೆ ಸರಳವಾಗಿತ್ತು. ಎಲ್ಲ ವಿಭಾಗಗಳಲ್ಲೂ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂಬುದೇ ನಮ್ಮ ಗುರಿ,” ಎಂದು ಅವರು ಹೇಳಿದರು. ಆಕ್ರಮಣಕಾರಿ ಬ್ಯಾಟಿಂಗ್‌ಗೆ ಒತ್ತು ನೀಡಿದ ಈ ತಂತ್ರವೇ ಸರಣಿಯಲ್ಲಿ ಫಲ ನೀಡಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ತಮ್ಮ ವೈಯಕ್ತಿಕ ಪ್ರದರ್ಶನದ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದ ಸೂರ್ಯಕುಮಾರ್, ಇತ್ತೀಚಿನ ಪಂದ್ಯಗಳಲ್ಲಿ ಬ್ಯಾಟಿಂಗ್ ನಿರೀಕ್ಷೆಯ ಮಟ್ಟಕ್ಕೆ ಬಂದಿಲ್ಲ ಎಂದು ಒಪ್ಪಿಕೊಂಡರು. “ಸೂರ್ಯ ದಿ ಬ್ಯಾಟರ್ ಈಗ ಸ್ವಲ್ಪ ಕಾಣೆಯಾಗಿದ್ದಾನೆ ಅನ್ನಿಸುತ್ತಿದೆ. ಆದರೆ ಅವನು ಖಂಡಿತವಾಗಿ ಇನ್ನಷ್ಟು ಬಲಿಷ್ಠನಾಗಿ ಮರಳಿ ಬರಲಿದ್ದಾನೆ,” ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದರು.

ತಂಡವಾಗಿ ಎಲ್ಲರೂ ಹೊಣೆ ಹೊತ್ತು ಆಡುತ್ತಿರುವುದು ನಾಯಕನಾಗಿ ನನಗೆ ತೃಪ್ತಿ ನೀಡುತ್ತಿದೆ ಎಂದು ಹೇಳಿದ ಸೂರ್ಯಕುಮಾರ್, ಈ ಸರಣಿಯ ಪ್ರದರ್ಶನ ಮುಂದಿನ ಸವಾಲುಗಳಿಗೆ ಬಲವಾದ ಅಡಿಪಾಯವಾಗಲಿದೆ ಎಂಬ ಸಂದೇಶವನ್ನೂ ನೀಡಿದರು.

Most Read

error: Content is protected !!