Sunday, October 12, 2025

ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ಗರ್ಭಗುಡಿ ಬಾಗಿಲು ಓಪನ್: ನಾಳೆಯಿಂದ ಭಕ್ತರಿಗೆ ದರುಶನ ಭಾಗ್ಯ

ವರ್ಷಕ್ಕೊಂದು ಬಾರಿ ಮಾತ್ರ ತೆರೆದುಕೊಳ್ಳುವ ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲು ಇಂದು ಮಧ್ಯಾಹ್ನ 12:21ಕ್ಕೆ ಶಾಸ್ತ್ರೋಕ್ತವಾಗಿ ಅನಾವರಣಗೊಂಡಿದೆ. ಕತ್ತಲು ಕವಿದಿದ್ದ ಗರ್ಭಗುಡಿಯಲ್ಲಿ ಕಳೆದ ವರ್ಷ ಹಚ್ಚಿದ್ದ ದೀಪ ಪ್ರಕಾಶಮಾನವಾಗಿ ಉರಿಯುತ್ತಿದ್ದುದು, ಕಾಲವನ್ನು ಗೆದ್ದ ಪವಾಡದಂತೆ ಭಕ್ತರನ್ನು ವಿಸ್ಮಯಗೊಳಿಸಿತು. ದೇವಿಯ ಮುಂದಿಟ್ಟಿದ್ದ ನೈವೇದ್ಯ ಹಳಸದೆ, ಅರ್ಪಿಸಿದ್ದ ಹೂವು ಬಾಡದೆ ಹಾಗೆಯೇ ಇರುವುದು ದೇವಿಯ ಅಲೌಕಿಕ ಶಕ್ತಿಗೆ ಸಾಕ್ಷಿಯಾಗಿದೆ.


ಅರಸು ವಂಶಸ್ಥ ನಂಜರಾಜೇಅರಸ್ ಅವರ ಪರಂಪರೆಯಂತೆ ಬಾಳೆಗೊನೆ ಕಡಿದ ನಂತರ ಮಂಗಳಕರ ಕ್ಷಣದಲ್ಲಿ ಬಾಗಿಲು ತೆರೆಯಲಾಯಿತು.

ಈ ಪುಣ್ಯ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಗಣ್ಯಾತಿಗಣ್ಯರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.


ಈಗ, ಇಂದಿನಿಂದ ಅಕ್ಟೋಬರ್ 23ರವರೆಗೆ, ಪುರಾಣ ಪ್ರಸಿದ್ಧ ಹಾಸನಾಂಬೆಯ ಜಾತ್ರಾ ಮಹೋತ್ಸವ ಆರಂಭಗೊಂಡಿದೆ. ಕೊನೆಯ ದಿನ ಹೊರತುಪಡಿಸಿ, ಮುಂದಿನ 13 ದಿನಗಳ ಕಾಲ ಕೋಟ್ಯಂತರ ಭಕ್ತರಿಗೆ ಕಾಲದ ಕರೆಯನ್ನು ಮೀರಿದ ದೇವಿಯ ದರ್ಶನ ಭಾಗ್ಯ ದೊರೆಯಲಿದೆ.

error: Content is protected !!