ಮೇಷ.
ಯಶಸ್ವೀ ದಿನ. ಕಾರ್ಯದಲ್ಲಿ ಯಶಸ್ಸು. ಕೌಟುಂಬಿಕ ತೊಡಕಿನಲ್ಲಿ ಸಿಲುಕಿಕೊಂಡಿದ್ದರೆ ಇಂದು ನಿರಾಳತೆ ಸಿಗುವುದು. ಧನಪ್ರಾಪ್ತಿ. ವೃಷಭ
ಆಸ್ಪತ್ರೆ ಭೇಟಿ, ಇನ್ನಿತರ ಕಾರಣದಿಂದ ಖರ್ಚು ಹೆಚ್ಚಾಗಬಹುದು. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ಶಾಂತಿ, ಸಮಾಧಾನ ಮೂಡಲಿದೆ.
ಮಿಥುನ
ಸಹೋದ್ಯೋಗಿಗಳ ಜತೆ ಹೊಂದಾಣಿಕೆ ಇರಲಿ. ನಿಮ್ಮ ದಾರಿಯೇ ಸರಿ ಎಂಬ ಕಠಿಣ ಧೋರಣೆ ತರವಲ್ಲ. ಆರ್ಥಿಕ ಬಿಕ್ಕಟ್ಟು ಪರಿಹಾರ ಕಾಣಲಿದೆ.
ಕಟಕ
ಯಾವುದೋ ಕೊರಗು. ಹತಾಶೆ. ಅಸಹನೆ. ಇತ್ತೀಚಿನ ಕೆಲ ಬೆಳವಣಿಗೆಗಳು ಇದಕ್ಕೆ ಕಾರಣ. ಸಹನೆಯಿಂದ ನಿಭಾಯಿಸಿ.
ಸಿಂಹ
ಭವಿಷ್ಯದ ಕುರಿತಂತೆ ಅನಿಶ್ಚಿತತೆ. ಅದರಿಂದ ಮನಸ್ಸಿಗೆ ವ್ಯಾಕುಲ. ನಿಜವಾಗಿ ಆತಂಕ ಅನವಶ್ಯ. ನಿಮಗೆ ಪೂರಕ ವಾತಾವರಣವಿದೆ.
ಕನ್ಯಾ
ಕೆಲವು ವಿಚಾರ ಚಿಂತೆಗೆ ಕಾರಣವಾಗಲಿದೆ. ಸುಲಭ ಪರಿಹಾರ ಗೋಚರಿಸದು. ಹಿರಿಯರ ಸಲಹೆಗಳಿಗೆ ಅಸಮಾಧಾನ ಬೇಡ. ಅದನ್ನು ಪಾಲಿಸಿರಿ.
ತುಲಾ
ವ್ಯವಹಾರದಲ್ಲಿ ಆತುರದ ಕ್ರಮ ಬೇಡ. ಅದರಿಂದ ನಿಮಗೇ ಹಾನಿ. ಕುಟುಂಬಸ್ಥರ ಭಾವನೆ ಗೌರವಿಸಿ. ಸಂಘರ್ಷಕ್ಕೆ ಹೊಂದಾಣಿಕೆಯೆ ಮದ್ದು.
ವೃಶ್ಚಿಕ
ಕೆಲಸದ ಒತ್ತಡದ ಮಧ್ಯೆಯೂ ಕುಟುಂಬ ಸದಸ್ಯರ ಜತೆ ಕಾಲ ಕಳೆಯುವ ಅವಕಾಶ. ವ್ಯವಹಾರದಲ್ಲಿ ಪ್ರಗತಿ. ಆರ್ಥಿಕ ಲಾಭ.
ಧನು
ಮನೆಯಲ್ಲಿ ಭಿನ್ನಾಭಿಪ್ರಾಯ ಉಂಟಾದೀತು. ವೃಥಾ ಆರೋಪ ಹೊರಿಸಲು ಹೋಗದಿರಿ. ಎಲ್ಲವನ್ನು ಪರಾಮರ್ಶಿಸಿ ನಿರ್ಧರಿಸಿ.
ಮಕರ
ಪ್ರೀತಿಪಾತ್ರರನ್ನು ಕಡೆಗಣಿಸಬೇಡಿ. ಉದ್ಯೋಗದ ಒತ್ತಡ ಬದಿಗಿಟ್ಟು ಅವರೊಂದಿಗೆ ಸಂವಹನ ಸಾಽಸಿ. ಹಣಕಾಸು ಕೊರತೆ.
ಕುಂಭ
ಕುಟುಂಬ ಸದಸ್ಯರ ಜತೆ ತಪ್ಪಭಿಪ್ರಾಯ ಉಂಟಾಗದಂತೆ ನೋಡಿಕೊಳ್ಳಿ. ಧನವ್ಯಯ ಹೆಚ್ಚು. ಖರ್ಚುವೆಚ್ಚದಲ್ಲಿ ಮಿತ ಸಾಽಸಿ.
ಮೀನ
ಕೆಲಸದಲ್ಲಿ ತೋರುವ ಪ್ರಸಂಗವಧಾನತೆ ಯಶಸ್ಸು ತರುವುದು. ಕೆಲವರ ಟೀಕೆಗೆ ಕಿವಿಗೊಡಬೇಡಿ. ಕೌಟುಂಬಿಕ ಸೌಹಾರ್ದತೆ ಕಾಪಾಡಲು ಆದ್ಯತೆ ಕೊಡಿ.
ದಿನಭವಿಷ್ಯ: ಇಂದು ಈ ರಾಶಿಯವರಿಗೆ ಯಶಸ್ವೀ ದಿನ, ಜೀವನ ನಿರಾಳ
