Thursday, October 23, 2025

ಹರಿಯಾಣ ಐಪಿಎಸ್ ಅಧಿಕಾರಿ ಡೆತ್ ಕೇಸ್ ಗೆ ಟ್ವಿಸ್ಟ್: ಮತ್ತೋರ್ವ ಪೊಲೀಸ್ ಸೂಸೈಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರಿಯಾಣದ ಹಿರಿಯ ಐಪಿಎಸ್ ಅಧಿಕಾರಿ ವೈ ಪೂರಣ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವೇಳೆ 9 ಪುಟಗಳ ಸೂಸೈಡ್ ನೋಟ್​​ನಲ್ಲಿ 12 ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿದ್ದರು.

ಇದೀಗ ಪ್ರಕರಣದಲ್ಲಿ ಭಾರೀ ತಿರುವೊಂದು ಪಡೆದುಕೊಂಡಿದ್ದು, ರೋಹ್ಟಕ್ ಸುಲಿಗೆ ಪ್ರಕರಣವನ್ನು ನಿರ್ವಹಿಸುತ್ತಿದ್ದ ತನಿಖಾಧಿಕಾರಿ ಸಂದೀಪ್ ಲಾಥರ್ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರು ಆತ್ಮಹತ್ಯೆ ಪತ್ರದಲ್ಲಿ ‘ಸತ್ಯಕ್ಕಾಗಿ’ ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಿರುವುದಾಗಿ ಬರೆದಿದ್ದಾರೆ. ಸಂದೀಪ್‌ ಸಾವಿಗೂ ಮುನ್ನ ವಿಡಿಯೋ ಒಂದನ್ನು ಮಾಡಿದ್ದರು. ಇದೀಗ ಅದು ವೈರಲ್‌ ಆಗಿದೆ.

ವಿಡಿಯೋದಲ್ಲಿ , ಎಡಿಜಿಪಿಯ ಸಿಬ್ಬಂದಿ ಅಧಿಕಾರಿ ಸಂಪೂರ್ಣವಾಗಿ ಭ್ರಷ್ಟ. ಆ ಅಧಿಕಾರಿ ಭ್ರಷ್ಟ ಅಧಿಕಾರಿಗಳನ್ನು ನಿಯೋಜಿಸಿ ಜಾತಿಯ ಆಧಾರದ ಮೇಲೆ ವರ್ಗಾವಣೆ ಮಾಡುತ್ತಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ. ಘಟನೆಯ ಕುರಿತು ಅಧಿಕಾರಿಗಳು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಆತ್ಮಹತ್ಯೆ ಪತ್ರದಲ್ಲಿ, ಕುಮಾರ್ ಒಬ್ಬ ಭ್ರಷ್ಟ ಪೊಲೀಸ್ ಮತ್ತು ತನ್ನ ಭ್ರಷ್ಟಾಚಾರ ಬಯಲಾಗುತ್ತದೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಲಾಥರ್ ಆರೋಪಿಸಿದ್ದಾರೆ.

ನಾನು ಈ ಸತ್ಯಕ್ಕಾಗಿ ನನ್ನ ಪ್ರಾಣವನ್ನೇ ತ್ಯಾಗ ಮಾಡುತ್ತಿದ್ದೇನೆ. ನಾನು ಪ್ರಾಮಾಣಿಕತೆಯೊಂದಿಗೆ ನಿಲ್ಲುತ್ತೇನೆ ಎಂದು ನನಗೆ ಹೆಮ್ಮೆ ಇದೆ. ದೇಶವನ್ನು ಜಾಗೃತಗೊಳಿಸಲು ಇದು ಮುಖ್ಯವಾಗಿದೆ ಎಂದು ಅವರು ಹೇಳಿದರು, ಅವರ ಕುಟುಂಬ ಸದಸ್ಯರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಎಂದು ಹೇಳಿದರು.

error: Content is protected !!