Saturday, November 8, 2025

Vastu | ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡ ಎಲ್ಲಿ ನೆಟ್ಟರೆ ಧನಾತ್ಮಕ ಶಕ್ತಿ ಹೆಚ್ಚಾಗುತ್ತೆ?

ಹಿಂದು ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರ ಸ್ಥಾನಮಾನವಿದೆ. ಪ್ರತಿ ಮನೆಯ ಮುಂಭಾಗದಲ್ಲೂ ತುಳಸಿಯನ್ನು ನೆಡುವುದು ಒಂದು ಸಂಪ್ರದಾಯ ಮಾತ್ರವಲ್ಲ, ಅದು ಶುಭದ ಸಂಕೇತವೂ ಹೌದು. ಆದರೆ ಎಲ್ಲೆಡೆ ತುಳಸಿ ನೆಟ್ಟರೂ ಫಲ ಸಿಗುವುದಿಲ್ಲ ವಾಸ್ತು ಶಾಸ್ತ್ರದ ಪ್ರಕಾರ ಸರಿಯಾದ ದಿಕ್ಕು ಮತ್ತು ವಿಧಾನದಲ್ಲಿ ನೆಟ್ಟರೆ ಮಾತ್ರ ಅದರ ಶಕ್ತಿಯು ಮನೆಯಲ್ಲಿ ಧನಾತ್ಮಕತೆ ಮತ್ತು ಶಾಂತಿ ತರಬಹುದು.

ವಿಷ್ಣುವಿನ ಆರಾಧನೆಯಲ್ಲಿ ತುಳಸಿಯ ವಿಶೇಷ ಸ್ಥಾನ

ತುಳಸಿ ದೇವಿ ಶ್ರೀ ವಿಷ್ಣುವಿನ ಆರಾಧನೆಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತಾಳೆ. ಪುರಾಣಗಳ ಪ್ರಕಾರ ತುಳಸಿಯಿಲ್ಲದೆ ವಿಷ್ಣುಪೂಜೆ ಪೂರ್ಣವಾಗುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರವೂ ಮನೆಯಲ್ಲಿ ತುಳಸಿ ಗಿಡ ಇಟ್ಟರೆ ವಾಸ್ತು ದೋಷಗಳು ನಿವಾರಣೆಯಾಗುತ್ತವೆ. ಶನಿ ಮತ್ತು ಮಂಗಳ ಗ್ರಹದ ಅಶುಭ ಪ್ರಭಾವದಿಂದ ಮುಕ್ತಿ ಪಡೆಯಲು ತುಳಸಿ ಅತ್ಯಂತ ಪರಿಣಾಮಕಾರಿ ಸಸ್ಯವೆಂದು ನಂಬಲಾಗಿದೆ.

ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು?

ವಾಸ್ತು ಶಾಸ್ತ್ರ ಪ್ರಕಾರ ತುಳಸಿ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ (ಉತ್ತರ-ಪೂರ್ವ) ನೆಡುವುದು ಅತ್ಯಂತ ಶುಭಕರ. ಈ ದಿಕ್ಕಿನಲ್ಲಿ ತುಳಸಿಯನ್ನು ಇಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹರಡುತ್ತದೆ. ಜೊತೆಗೆ ಬೆಳಿಗ್ಗೆ ಮತ್ತು ಸಂಜೆ ನೀರನ್ನು ಅರ್ಪಿಸಿ ಪೂಜಿಸುವುದು ಅವಶ್ಯಕ.

ದೀಪ ಹಚ್ಚುವ ಮಹತ್ವ

ಸಂಜೆ ವೇಳೆಗೆ ತುಳಸಿಯ ಕೆಳಗೆ ಎಳ್ಳೆಣ್ಣೆಯ ದೀಪ ಹಚ್ಚುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ದೀಪ ಹಚ್ಚಿದರೆ ಮನೆಯಲ್ಲಿನ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ ಮತ್ತು ಲಕ್ಷ್ಮೀ ದೇವಿಯ ಆಶೀರ್ವಾದ ಸಿಗುತ್ತದೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.

ಮನೆಯಲ್ಲಿನ ಅಸಮಾಧಾನ, ಜಗಳ ಅಥವಾ ಕಲಹಗಳು ಹೆಚ್ಚಿದ್ದರೆ, ತುಳಸಿ ಗಿಡವನ್ನು ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಡುವುದು ಉತ್ತಮ.

ವಾಸ್ತು ದೋಷ ನಿವಾರಣೆಗೆ ತುಳಸಿ ಪರಿಹಾರ

ಮನೆ ಕಟ್ಟುವಾಗ ದಿಕ್ಕುಗಳಲ್ಲಿನ ದೋಷಗಳು ಉಂಟಾದರೆ, ಅಥವಾ ಮನೆ ಬದಲಾಯಿಸಲು ಸಾಧ್ಯವಾಗದಿದ್ದರೆ, ಮನೆಯ ಮಾಳಿಗೆಯಲ್ಲಿ ಕುಂಡದಲ್ಲಿ ತುಳಸಿಯನ್ನು ನೆಡುವುದು ಪರಿಣಾಮಕಾರಿ ಪರಿಹಾರ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ಮೂಲೆಯಲ್ಲಿ ಐದು ತುಳಸಿ ಗಿಡಗಳನ್ನು ಬೇರೆ ಬೇರೆ ಕುಂಡಗಳಲ್ಲಿ ನೆಟ್ಟು ಪ್ರತಿದಿನ ಪೂಜಿಸಿದರೆ ವಾಸ್ತು ದೋಷಗಳು ನಿವಾರಣೆಯಾಗುತ್ತವೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

error: Content is protected !!