February 25, 2026
Wednesday, February 25, 2026
spot_img

ವಿಜಯ ಹಝಾರೆ ಟ್ರೋಫಿ | ಕಮ್‌ಬ್ಯಾಕ್ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಹೆಗಲಿಗೆ ಕ್ಯಾಪ್ಟನ್ ಪಟ್ಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಾಯದ ಕಾರಣದಿಂದ ಕೆಲವು ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರವಿದ್ದ ಶ್ರೇಯಸ್ ಅಯ್ಯರ್ ಮತ್ತೆ ಆಟದ ಮೈದಾನಕ್ಕೆ ಮರಳಲು ಸಿದ್ಧರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆ ಉಂಟಾದ ಗಂಭೀರ ಗಾಯದ ಬಳಿಕ, ಅವರ ಮೊದಲ ಸ್ಪರ್ಧಾತ್ಮಕ ಹಾಜರಿ ವಿಜಯ ಹಝಾರೆ ಟ್ರೋಫಿಯಲ್ಲಿ ನಡೆಯಲಿದೆ ಎಂಬುದು ಕ್ರಿಕೆಟ್ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ.

ಮುಂಬೈ ತಂಡದ ನಾಯಕ ಶಾರ್ದೂಲ್ ಠಾಕೂರ್ ಗಾಯಗೊಂಡು ಟೂರ್ನಿಯಿಂದ ಹೊರಗುಳಿದ ಕಾರಣ, ತಂಡದ ಜವಾಬ್ದಾರಿಯನ್ನು ಶ್ರೇಯಸ್ ಅಯ್ಯರ್‌ಗೆ ವಹಿಸಲಾಗಿದೆ. ಇದರಂತೆ, ಜನವರಿ 6ರಂದು ಹಿಮಾಚಲ ಪ್ರದೇಶ ವಿರುದ್ಧ ನಡೆಯುವ ಪಂದ್ಯದಲ್ಲಿ ಅವರು ಮುಂಬೈ ತಂಡದ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಇದಲ್ಲದೆ, ಜನವರಿ 8ರಂದು ಪಂಜಾಬ್ ವಿರುದ್ಧ ನಡೆಯುವ ಪಂದ್ಯದಲ್ಲೂ ಅಯ್ಯರ್ ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದೆ.

ಇದನ್ನೂ ಓದಿ: FOOD | ಆರೋಗ್ಯಕರ ಕ್ಯಾರೆಟ್ ಪಲ್ಯ: ಅನ್ನ-ಸಾರು ಜೊತೆ ಬೆಸ್ಟ್

ಈ ಎರಡು ಪಂದ್ಯಗಳು ಅಯ್ಯರ್‌ಗೆ ಕೇವಲ ದೇಶೀಯ ಟೂರ್ನಿಯ ಭಾಗವಲ್ಲ, ಅವರ ಫಿಟ್‌ನೆಸ್ ಪರೀಕ್ಷೆಯೂ ಆಗಿದೆ. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆಯೇ ಎಂಬುದನ್ನು ಈ ಪಂದ್ಯಗಳ ಮೂಲಕ ಆಯ್ಕೆ ಸಮಿತಿ ಗಮನಿಸಲಿದೆ. ಶ್ರೇಯಸ್ ಅಯ್ಯರ್ ಈಗಾಗಲೇ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದರೂ, ರಾಷ್ಟ್ರೀಯ ತಂಡಕ್ಕೆ ಸೇರುವ ಮೊದಲು ದೇಶೀಯ ಮಟ್ಟದಲ್ಲಿ ಆಡಬೇಕು ಎಂಬ ಸೂಚನೆ ನೀಡಲಾಗಿತ್ತು.

ವಿಜಯ ಹಝಾರೆ ಪಂದ್ಯಗಳಲ್ಲಿ ಅಯ್ಯರ್ ಪ್ರದರ್ಶನ ಮತ್ತು ದೈಹಿಕ ಸ್ಥಿತಿ ತೃಪ್ತಿಕರವಾಗಿದ್ದರೆ, ಅವರು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮುಂಬೈ ತಂಡಕ್ಕೂ, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ಈ ಕಮ್‌ಬ್ಯಾಕ್ ಬಹಳ ಮಹತ್ವ ಪಡೆದುಕೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !