ಹೊಸದಿಗಂತ ಡಿಜಿಟಲ್ ಡೆಸ್ಕ್:
ಟ್ರಾವೆಲ್ ಮಾಡ್ಬೇಕು ಆದರೆ ಜೊತೆ ಇಲ್ಲ! ಟ್ರಾವೆಲ್ ಮಾಡ್ಬೇಕು ಆದರೆ ದುಡ್ಡು ಜಾಸ್ತಿ, ಟ್ರಾವೆಲ್ ಮಾಡ್ಬೇಕು ಆದರೆ ಹೇಗೆ ಹೋಗೋದು ಗೊತ್ತಿಲ್ಲ!
ಈ ರೀತಿ ನೆಪ ಹೇಳೋದು ಬಿಟ್ಬಿಡಿ ಏಕೆಂದರೆ ಕರ್ನಾಟಕದ ದಕ್ಷಿಣ ಭಾಗಗಳಿಗೆ ಕೆಎಸ್ಡಿಟಿಸಿ ಟ್ರಿಪ್ ಅರೇಂಜ್ ಮಾಡಿದೆ.
ಹೌದು, ಕೆಎಸ್ಟಿಡಿಸಿ ರಾಜ್ಯದ ಪುಣ್ಯಕ್ಷೇತ್ರಗಳಿಗೆ ತೆರಳಲು ವಿಶೇಷ ಪ್ಯಾಕೇಜ್ ಘೋಷಿಸಿದೆ. ಒಟ್ಟು ಆರು ದಿನಗಳ ಟ್ರಿಪ್ ಇದಾಗಿದೆ.
ಯಾವೆಲ್ಲ ಸ್ಥಳಕ್ಕೆ ಟ್ರಿಪ್?
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು, ಉಡುಪಿ, ಕೊಲ್ಲೂರು, ಮುರುಡೇಶ್ವರ ಹಾಗೂ ಗೋಕರ್ಣ
ಎಲ್ಲಿಂದ ಹೊರಡೋದು?
ಬಿಎಂಟಿಸಿ ಬಸ್ ನಿಲ್ದಾಣದಿಂದ ಯಶವಂತಪುರಕ್ಕೆ ಹೊರಡುವುದು. ನಿತ್ಯವೂ ಊಟ, ತಿಂಡಿ, ನಾಲ್ಕರಿಂದ ಐದು ಸ್ಥಳಗಳಿಗೆ ಪ್ರಯಾಣ ಇರುತ್ತದೆ.



