Tuesday, September 2, 2025

ಬಳ್ಳಾರಿ ಜೈಲಿಗೆ ಹೋಗ್ತಾರಾ ನಟ ದರ್ಶನ್​​? ಇಂದು ಕೋರ್ಟ್ ನಲ್ಲಿ ವಾದ-ಪ್ರತಿವಾದ ಹೇಗಿತ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ದರ್ಶನ್​​ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡುವ ವಿಚಾರ ಇಂದು 64ನೇ ಸೆಷನ್​ ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಯಿತು.

ಇವತ್ತು ನಟ ದರ್ಶನ್​ ಬಳ್ಳಾರಿ ಶಿಫ್ಟ್​ ವಿಚಾರವಾಗಿ ವಾದ- ಪ್ರತಿವಾದ ನಡೆದಿದ್ದು, ಬಳಿಕ ವಿಚಾರಣೆ ಮುಂದೂಡಿಕೆ ಆಗಿರುವ ಕಾರಣ, ನಾಳೆ ಸಂಜೆವರೆಗೂ ಪರಪ್ಪನ ಅಗ್ರಹಾರದಲ್ಲೇ ದಾಸ ವಾಸ್ತವ್ಯ ಮಾಡಲಿದ್ದಾರೆ.

ಎಸ್​ಪಿಪಿ ಪ್ರಸನ್ನ ಕುಮಾರ್​ ವಾದ ಮಂಡಿಸಿ, ಆಡಳಿತಾತ್ಮಕ ದೃಷ್ಟಿಯಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡುವಂತೆ ಮನವಿ ಮಾಡಿದರು. ಸುಪ್ರೀಂ ಕೋರ್ಟ್​ ಜಾಮೀನು ರದ್ದು ಮಾಡುವಾಗ ಆರೋಪಿಯೂ ಪ್ರಭಾವಿ. ಈ ಹಿಂದೆ ಜೈಲಿನ ರೂಲ್ಸ್ ಉಲ್ಲಂಘನೆ ಮಾಡಿರೋದನ್ನ ಉಲ್ಲೇಖಿಸಿದೆ. ಜೊತೆಗೆ ಈ ಹಿಂದೆ ರಾಜಾತಿಥ್ಯ ಸಂಬಂಧ ಕೇಸ್ ದಾಖಲಾಗಿದೆ. ಆರೋಪಿಗೆ ಸಾಕಷ್ಟು ಅಭಿಮಾನಿಗಳಿದ್ದು, ಸಮಾಜದಲ್ಲಿ ರೋಲ್ ಮಾಡಲ್ ಆಗಿರಬೇಕು. ಇಂತಹ ವ್ಯಕ್ತಿ ಕೊಲೆಯಂಥ ಗಂಭೀರ ಆರೋಪದಲ್ಲಿ ಭಾಗಿಯಾಗಿದ್ದಾನೆ. ಆರೋಪಿಗೆ ರಾಜಾತಿಥ್ಯ ನೀಡಿದರೆ ಜೈಲು ಅಧಿಕಾರಿಯನ್ನು ಅಮಾನತು ಮಾಡಲಾಗುತ್ತೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜೊತೆಗೆ ಆಡಳಿತಾತ್ಮಕ ದೃಷ್ಟಿಯಿಂದ ಸ್ಥಳಾಂತರಕ್ಕೆ ಮನವಿ ಮಾಡಲಾಗಿದೆ. ಚಾರ್ಜ್ ಫ್ರೇಮ್ ಸೇರಿದಂತೆ ವಿಚಾರಣೆಯನ್ನ ವಿಸಿ ಮೂಲಕ ಮಾಡಬಹುದು. ಇದಕ್ಕೆ ಬಿಎನ್​ಎಸ್​ನಲ್ಲಿ ಅವಕಾಶವಿದೆ. ಜೈಲು ಮ್ಯಾನ್ಯೂಯಲ್ 507 ಪ್ರಕಾರ ವಿಸಿ ಮೂಲಕ ಭೇಟಿಗೆ ಅವಕಾಶ ಇದೆ. ಹೀಗಾಗಿ ಐದು ಆರೋಪಿಗಳನ್ನ ಈ ಹಿಂದಿನ ಜೈಲುಗಳಿಗೆ ಶಿಫ್ಟ್ ಮಾಡಲು ಆದೇಶ ನೀಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ:ನೆಸ್ಲೆ ಕಂಪನಿ ಸಿಇಓಗೆ ಸೀಕ್ರೆಟ್ ಅಫೇರ್ ಕಾರಣದಿಂದ ಕಂಪನಿಯಿಂದಲೇ ಗೇಟ್ ಪಾಸ್‌!

ಈ ವೇಳೆ ದರ್ಶನ್​ ಪರ ವಕೀಲರು ಜೈಲು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ಜೈಲು ಅಧಿಕಾರಿಗಳು ಕನಿಷ್ಠ ಸೌಲಭ್ಯ ನೀಡಬೇಕು. ಬಟ್ಟೆ, ಆಹಾರ, ಹಾಸಿಗೆ, ದಿಂಬುಗಳು ಸೇರಿ ಬೆಸಿಕ್ ಸೌಲಭ್ಯಗಳನ್ನ ಸ್ವಂತವಾಗಿ ಪಡೆಯಲು ಅವಕಾಶ ಇದೆ. ಸುಪ್ರೀಂ ಕೋರ್ಟ್​ ಒಬ್ಬ ಆರೋಪಿಗೆ ಸೆಲೆಬ್ರಿಟಿ ಸ್ಟೇಟಸ್ ನೋಡಬಾರದು ಎಂದು ಹೇಳಿದೆ. ಆದ್ರೆ ಕನಿಷ್ಟ ಸೌಲಭ್ಯಗಳನ್ನು ನೀಡಬಾರದೆಂದು ಹೇಳಿಲ್ಲ. ಸ್ವೆಟರ್, ಬೆಡ್​ಶೀಟ್​ ಕೂಡ ಕೊಡಲ್ಲ ಅಂದ್ರೆ ಹೇಗೆ? ಎಂದು ಪ್ರಶ್ನೆ ಮಾಡಿದರು.

ಜೈಲಿನಲ್ಲಿ ಶೂ ಹಾಕಿಕೊಂಡು ಹೋದರೆ ಶೂ ಬಿಚ್ಚಿಸುತ್ತಾರೆ. ಊಟವನ್ನು ಬಿಸಾಕುವ ಕೆಲಸ ಮಾಡ್ತಾರೆ. ಕಾಂಡಿಮೆಂಟ್ಸ್‌​ ಹಣ ನೀಡಲು ಬಿಡ್ತಿಲ್ಲ. ಕಾನೂನಿನ ಪ್ರಕಾರ ಏನು ಕೊಡಬೇಕು ಅದನ್ನ ಕೊಡಿ ಅಂತ ಕೇಳ್ತಿದ್ದೇವೆ ಎಂದರು.

ಎರಡೂ ಕಡೆಯ ವಾದ-ಪ್ರತಿವಾದವನ್ನು ಆಲಿಸಿದ 64ನೇ ಸೆಷನ್ಸ್ ಕೋರ್ಟ್ ವಿಚಾರಣೆಯನ್ನು ನಾಳೆ ಸಂಜೆ 4 ಗಂಟೆಗೆ ಮುಂದೂಡಿಕೆ ಮಾಡಲಾಯಿತು.

ಇದನ್ನೂ ಓದಿ