ಕಾಂತಾರ ನೋಡಲು ಹೋದಾಗ ಈ ನಟಿ ವಿಸಲ್​ ತೆಗೆದುಕೊಂಡು ಹೋಗಿದ್ದು ಯಾಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಂತಾರ ಸಿನಿಮಾ ನೋಡಿದ ಅನೇಕ ನಾಯಕ ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೀಗ ಕರಾವಳಿ ಮೂಲದ ‘ರಂಗಿತರಂಗ’ ಖ್ಯಾತಿಯ ನಟಿ ಆವಂತಿಕಾ ಶೆಟ್ಟಿ ಕೂಡ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣ, ರಿಷಬ್ ಶೆಟ್ಟಿ ರಚನೆ-ನಿರ್ದೇಶನದಲ್ಲಿ ಮೂಡಿಬಂದು ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಂತಾರವನ್ನು ಒಂದಲ್ಲ, ಎರಡು ಸಲ ನೋಡಿದ್ದಾರೆ. ಅದರಲ್ಲೂ ಎರಡನೇ ಸಲ ನೋಡಲು ಹೋಗುವಾಗ ಸುಮ್ಮನೆ ಹೋಗಿಲ್ಲ ಎಂಬುದನ್ನೂ ಹೇಳಿಕೊಂಡಿದ್ದಾರೆ.

 

ನಾನು ಮೊದಲನೇ ಸಲ ಕಾಂತಾರ ಚಿತ್ರವನ್ನು ಬೆಂಗಳೂರಿನಲ್ಲಿ ನೋಡಿ, ನನ್ನ ಧ್ವನಿಯನ್ನೇ ಕಳೆದುಕೊಂಡಿದ್ದೆ. ಖಂಡಿತವಾಗಿಯೂ ಅದು ಸಿನಿಮಾ ನೋಡುವಾಗ ಕೂಗಿ ಕೂಗಿಯೇ ಹಾಗಾಗಿದ್ದು. ಹೀಗಾಗಿ ಎರಡನೇ ಸಲ ಕಾಂತಾರವನ್ನು ಮುಂಬೈನದಲ್ಲಿ ನೋಡುವಾಗ ವಿಸಲ್​ ತೆಗೆದುಕೊಂಡು ಹೋಗಿದ್ದೆ ಎಂಬುದಾಗಿ ಆವಂತಿಕಾ ಹೇಳಿಕೊಂಡಿದ್ದಾರೆ. ಇಂಥದ್ದೊಂದು ಸುಂದರ ಕಲಾತ್ಮಕ ಸಿನಿಮಾ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದು ಅವರು ರಿಷಬ್​ ಶೆಟ್ಟಿಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!