ಹೊಸದಿಗಂತ ವರದಿ, ವಿಜಯಪುರ:
ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಇಬ್ಬರು ಶಿಕ್ಷಕರನ್ನು ವಿಜಯಪುರ ನಗರ ವಲಯ ಬಿಇಒ ಬಸವರಾಜ್ ತಳವಾರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಸಹ ಶಿಕ್ಷಕ ಎಂ.ಕೆ ಪಾಟೀಲ ಹಾಗೂ ಮುಖ್ಯ ಗುರು ಜಗದೀಶ ಅಕ್ಕಿ ಅಮಾನತುಗೊಂಡವರು.
ನಗರದ ಕೆಬಿಎಸ್ ನಂಬರ್ 4 ರ ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ ಹಾಗೂ ಬ್ಯಾಡ್ ಟಚ್ ಆರೋಪದ ಹಿನ್ನೆಲೆ ಬಿಇಒ ಬಸವರಾಜ್ ತಳವಾರ, ಇಲಾಖಾ ವಿಚಾರಣೆ ಕಾಯ್ದಿರಿಸಿ, ತಕ್ಷಣದಿಂದ ಅಮಾನತುಗೊಳಿಸಿದ್ದಾರೆ.