ದೇಶವು ಜೈ ಶ್ರೀ ರಾಮ್ ಜಪಿಸಿ ಹಸಿವಿನಿಂದ ಸಾಯಬೇಕು ಎಂದು ಪ್ರಧಾನಿ ಬಯಸಿದ್ದಾರೆ: ರಾಹುಲ್ ಗಾಂಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶವು ‘ಜೈ ಶ್ರೀ ರಾಮ್ ಎಂದು ಜಪಿಸಬೇಕು ಮತ್ತು ಹಸಿವಿನಿಂದ ಸಾಯಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಾರೆ ಎಂದು ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಧ್ಯಪ್ರದೇಶದ ಸಾರಂಗ್ಪುರದಿಂದ ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆ ಇಂದು ಪುನರಾರಂಭಗೊಂಡ ಸಂದರ್ಭ ಮಾತನಾಡಿದರು.

ಕಾಂಗ್ರೆಸ್ ಸಂಸದರನ್ನು ಬಿಜೆಪಿ ಕಾರ್ಯಕರ್ತರು “ಮೋದಿ, ಮೋದಿ” ಮತ್ತು “ಜೈ ಶ್ರೀ ರಾಮ್” ಘೋಷಣೆಗಳೊಂದಿಗೆ ಸ್ವಾಗತಿಸಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ಎತ್ತಿದ ಘೋಷಣೆಗಳನ್ನು ಸ್ವಾಗತಿಸಿದ ರಾಹುಲ್ ಗಾಂಧಿ, ನಿರುದ್ಯೋಗದ ವಿರುದ್ಧ ಪ್ರಧಾನಿಯನ್ನು ಟೀಕಿಸಿದರು, ಯುವ ನಿರುದ್ಯೋಗಿ ವ್ಯಕ್ತಿಗಳು ದಿನವಿಡೀ ರೀಲ್ಸ್ ಗಳನ್ನು (ಸಾಮಾಜಿಕ ಮಾಧ್ಯಮಗಳಲ್ಲಿ) ನೋಡುತ್ತಲೇ ಇರುತ್ತಾರೆ .ನೀವು ದಿನವಿಡೀ ನಿಮ್ಮ ಫೋನ್ ಗಳನ್ನು ನೋಡಬೇಕು, ಜೈ ಶ್ರೀ ರಾಮ್ ಎಂದು ಜಪಿಸಬೇಕು ಮತ್ತು ನಂತರ ಹಸಿವಿನಿಂದ ಸಾಯಬೇಕು ಎಂದು ಪ್ರಧಾನಿ ಬಯಸುತ್ತಾರೆ ಎಂದು ಹೇಳಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಗ್ನಿವೀರ್ ಯೋಜನೆಯ ಬಗ್ಗೆ ಮಾತನಾಡಿದ ಕಾಂಗ್ರೆಸ್ ಸಂಸದ, ಈ ಹಿಂದೆ, ಸಶಸ್ತ್ರ ಪಡೆಗಳು ಯುವಕರಿಗೆ ಒಂದೆರಡು ಭರವಸೆಗಳನ್ನು ನೀಡುತ್ತಿದ್ದವು, ಮೊದಲನೆಯದಾಗಿ, ಯುವಕರಿಗೆ ಪಿಂಚಣಿ ನೀಡಲಾಗುವುದು ಮತ್ತು ಎರಡನೆಯದಾಗಿ, ಅವರು ಪ್ರಾಣ ಕಳೆದುಕೊಂಡರೆ ಅವರಿಗೆ ಗೌರವ ಸಿಗುತ್ತದೆ, ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!