ಹೊಸದಿಗಂತ ವರದಿ,ಕಲಬುರಗಿ:
ರಾಜಕೀಯ ಮುಖಂಡರ ಕುಮ್ಮಕ್ಕಿನಿಂದ ನನ್ನ ಮೇಲೆ ದಲಿತ ಸೇನೆಯವರು ವಿನಾಕಾರಣ ಸುಳ್ಳು ಪ್ರಕರಣ ದಾಖಲಿಸಿ,ನನ್ನ ಹೆಸರು ಮತ್ತು ವ್ಯವಹಾರಕ್ಕೆ ತೊಂದರೆ ಕೊಡುತ್ತಿದ್ದಾರೆ ಎಂದು ಎಂ,ಆರ್,ಮಾರ್ಟ,ನ ಉದ್ಯಮಿ ಮಣಿಕಂಠ ರಾಠೋಡ ತಿಳಿಸಿದ್ದಾರೆ.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೋವಿಡ್ ಸಮಯದಲ್ಲಿ ನನ್ನ ಸಹೋದರರಾದ ಸೈನಿಕ ರಾಠೋಡ್,ಶಿವರಾಜ ರಾಠೋಡ್ ಅವರೊಂದಿಗೆ ಚಿತ್ತಾಪುರ ಪಟ್ಟಣದ ವಾರ್ಡ ನಂ-16ರಲ್ಲಿ ಬಡವರಿಗಾಗಿ ಮತ್ತು ನಿರ್ಗತಿಕರಿಗಾಗಿ ಆಹಾರ ಸಾಮಗ್ರಿಗಳನ್ನು ವಿತರಣೆ, ಔಷದ ವಿತರಣೆ ಮಾಡಿದ್ದು,ಇದನ್ನು ಸಹಿರಸೇ ಪಟ್ಟಣದ ರಾಜಕೀಯ ನಾಯಕರು ಸಹಿಸದೇ ದಲಿತ ಸೇನೆಯ ಮುಖಾಂತರ ನನಗೆ ತೊಂದರೆ ಕೊಡುತ್ತಿದ್ದಾರೆ ಎಂದರು.
ಇತ್ತೇಚೆಗೆ 3-2-2022ರಂದು ಶ್ರೀಮತಿ ಭಾರತಿ ಪಾಟೀಲ ಆಹಾರ ನಿರೀಕ್ಷಕರು ದಲಿತ ಸೇನೆಯ ಮುಖಂಡರ ಮಾತು ಕೇಳಿ ಎಂ,ಹೆಚ್.43,ಯೂ 8847 ಲಾರಿಯನ್ನು ಹಿಡಿದು ಕಾಳಸಂತೆಯಲ್ಲಿ ಅಕ್ಕಿ ಸಾಗಾಟ ಮಾಡುತ್ತಿದ್ದೇವೆ ಎಂದು ನನ್ನ ಮೇಲೆ ಮತ್ತು ನನ್ನ ಗೆಳೆಯರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದು, ಈ ಲಾರಿಗಾಗಲಿ ಅಥವಾ ಲಾರಿಯಲ್ಲಿನ ಅಕ್ಕಿ ಗೆ ನಮಗೆ ಯಾವುದೇ ಸಂಭಂದವಿಲ್ಲ ಎಂದರು.
ಬಡವರಿಗೆ,ನಿರ್ಗತಿಕರಿಗೆ ಕಿಟ್ ವಿತರಣೆ ಮಾಡಿದ್ದರಿಂದ ನಾವು ರಾಜಕೀಯದಲ್ಲಿ ಬೆಳೆಯುತ್ತೀವಿ ಎಂದು ಮನಗಂಡು ಚಿತ್ತಾಪುರ ಪಟ್ಟಣದ ರಾಜಕೀಯ ಮುಖಂಡರು ನಮ್ಮ ಮೇಲೆ ದಲಿತ ಸೇನೆಯ ಮುಖಾಂತರ ಸುಳ್ಳು ದೂರು ದಾಖಲಿಸಿದ್ದಾರೆ. ರಾಜಕೀಯ ಮುಖಂಡರಿಗೆ ರಾಜಕೀಯವಾಗಿಯೇ ಉತ್ತರ ನಾವು ಸಿದ್ದರಿದ್ದೇವೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಶಿವರಾಜ ರಾಠೋಡ್,ಶರಣು ಅವರಾದಿ ಇದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ