ಆದರ್‌ ಫೂನಾವಾಲಾ ಹೆಸರಿನಲ್ಲಿ 1 ಕೋಟಿ ವಂಚನೆ: 7 ಮಂದಿಯ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕೊರೋನಾ ಲಸಿಕೆ ಕೋವಿಶೀಲ್ಡ್‌ ಮೂಲಕ ಹೆಸರಾದ ಸೀರಮ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾಕ್ಕೆ 1 ಕೋಟಿ ರೂಪಾಯಿ ವಂಚನೆ ಮಾಡಿದ್ದ 7 ಮಂದಿ ಕಳ್ಳರನ್ನು ಪುಣೆ ಪೊಲೀಸ್‌ ಬಂಧಿಸಿದ್ದಾರೆ .

ಸೀರಮ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾದ ನಿರ್ದೇಶಕರಿಗೆ 1.01 ಕೋಟಿ ರೂಪಾಯಿ ವಂಚನೆ ಮಾಡಿದ್ದರು.

ದೂರಿನ ಪ್ರಕಾರ, ಸೀರಮ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ ಅಥವಾ ಎಸ್‌ಐಐ ನಿರ್ದೇಶ ಸತೀಶ್‌ ದೇಶಪಾಂಡೆ, 2022ರ ಸೆಪ್ಟೆಂಬರ್‌ನಲ್ಲಿ ತಮ್ಮ ನಂಬರ್‌ಗೆ ಒಂದು ವಾಟ್ಸ್‌ಆಪ್‌ ಮೆಸೇಜ್‌ ಅನ್ನು ಸ್ವೀಕರಿಸಿದ್ದರು. ಕಂಪನಿಯ ಸಿಇಓ ಆದರ್‌ ಫೂನಾವಾಲಾ ಹೆಸರಿನಲ್ಲಿ ಮೆಸೇಜ್‌ ಮಾಡಿದ್ದ ವ್ಯಕ್ತಿ, ತಾವು ಹೇಳುವ ಏಳು ಅಕೌಂಟ್‌ಗಳಿಗೆ ಇಷ್ಟಿಷ್ಟು ಹಣವನ್ನು ಪಾವತಿ ಮಾಡುವಂತೆ ಸೂಚನೆ ನೀಡಿದ್ದರು. ಇದನ್ನು ಸ್ವತಃ ಆದರ್‌ ಫೂನಾವಾಲಾ ಅವರು ಕಳಿಸಿರುವ ಮೆಸೇಜ್‌ ಎಂದುಕೊಂಡ ಸತೀಶ್‌ ದೇಶಪಾಂಡೆ ಒಟ್ಟು 1.01 ಕೋಟಿ ರೂಪಾಯಿ ಮೊತ್ತವನ್ನು ಈ ಏಳು ಅಂಕೌಟ್‌ಗೆ ವರ್ಗಾವಣೆ ಮಾಡಿದ್ದರು. ಅದಾದ ಬಳಿಕ ಅವರಿಗೆ ತಾವು ಮೋಸ ಹೋಗಿರುವುದು ತಿಳಿದುಬಂದಿತ್ತು. ಈ ನಿಟ್ಟಿನಲ್ಲಿ ಅವರು ಪುಣೆ ಪೊಲೀಸ್‌ನಲ್ಲಿ ದೂರು ಕೂಡ ದಾಖಲು ಮಾಡಿದ್ದರು.

ತನಿಖೆ ವೇಳೆ ಪೊಲೀಸರು ಹಣ ವರ್ಗಾವಣೆ ಮಾಡಿರುವ ಎಂಟು ಖಾತೆಗಳ ಬಗ್ಗೆ ಪೊಲೀಸರು ಪರಿಶೀಲನೆ ಆರಂಭಿಸಿದ್ದರು. ದೇಶದ ವಿವಿಧ ಭಾಗಗಳಿಂದ ಬಂಧಿಸಲ್ಪಟ್ಟಿರುವ ಈ ಏಳು ಜನರ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಪ್ರಮುಖ ಆರೋಪಿ ಇನ್ನೂ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಉಪ ಆಯುಕ್ತ (ಡಿಸಿಪಿ) ಸ್ಮಾರ್ತನ ಪಾಟೀಲ್ (ವಲಯ II) ಹೇಳಿದ್ದಾರೆ.

ಈ ಏಳು ಅಕೌಂಟ್‌ಗಳಿಂದ 40 ಇತರ ಅಕೌಂಟ್‌ಗಳಿಗೆ ಹಣ ವರ್ಗಾವಣೆ ಆಗಿತ್ತು. ಈ ಎಲ್ಲಾ ಅಕೌಂಟ್‌ಗಳನ್ನು ಪೊಲೀಸರು ಸೀಜ್‌ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಾರೆ ಈ ಅಕೌಂಟ್‌ಗಳಿಂದ 13 ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!