ಹೊಸದಿಗಂತ ಡಿಜಿಟಲ್ ಡೆಸ್ಕ್:
ಐತಿಹಾಸಿಕ ಅಯೋಧ್ಯೆ ಶ್ರೀ ರಾಮ ಜನ್ಮಭೂಮಿಯಲ್ಲಿ ರಾಮಲಲಾನ ಪ್ರಾಣ ಪ್ರತಿಷ್ಠಾಪನೆ ಅದ್ದೂರಿಯಾಗಿ ನಡೆದಿದೆ.
ಭವ್ಯ ರಾಮ ಮಂದಿರ ಸಾರ್ವಜನಿಕರಿಗೆ ಮುಕ್ತವಾಗಿದ್ದು, ರಾಮಭಕ್ತರು ಬಾಲಕರಾಮನ ದರ್ಶನಕ್ಕೆ ಉತ್ಸಾಹ ತೋರುತ್ತಿದ್ದಾರೆ.
ಇದೀಗ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಸಂಕೀರ್ಣದಲ್ಲಿ ಕನಿಷ್ಠ 13 ದೇವಾಲಯಗಳನ್ನು ನಿರ್ಮಿಸುವ ಯೋಜನೆ ನಡೆಯುತ್ತಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಸ್ಟ್ನ ಖಜಾಂಚಿ ಗುರುದೇವ್ ಗಿರಿಜಿ, ಮುಂದಿನ ದಿನಗಳಲ್ಲಿ ರಾಮ ಮಂದಿರ ಸಂಕೀರ್ಣದಲ್ಲಿ 13 ದೇವಾಲಯಗಳನ್ನು ನಿರ್ಮಾಣ ಮಾಡುವುದು ಹಾಗೂ ಪ್ರಧಾನ ದೇವಸ್ಥಾನದ ಸಣ್ಣಪುಟ್ಟ ಕೆಲಸಗಳನ್ನು ಮುಕ್ತಾಯ ಮಾಡುವುದು ತಮ್ಮ ಗುರಿ ಎಂದು ಹೇಳಿದ್ದಾರೆ.
ಪ್ರಧಾನ ದೇವಸ್ಥಾನದಲ್ಲಿ ಬಾಲಕರಾಮ ಪ್ರತಿಷ್ಠಾಪನೆಯಾಗಿರುವ ಮೊದಲನೆ ಮಹಡಿ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಎರಡನೇ ಮಹಡಿಯಲ್ಲಿ ಕೆಲಸ ಪ್ರಗತಿಯಲ್ಲಿದೆ, ನಂತರ ಶಿಖರ ಅಂದರೆ ಕೇಂದ್ರ ಗುಮ್ಮಟ ಮಾಡಬೇಕಾಗಿದೆ ಎಂದು ಗಿರಿಜಿ ತಿಳಿಸಿದ್ದಾರೆ.
ಪ್ರಧಾನ ದೇವಸ್ಥಾನದ ಎಲ್ಲಾ ಕಾಮಗಾತಿ ಮುಗಿದ ಬಳಿಕ, “ರಾಮ ಪರಿವಾರ” ಕ್ಕಾಗಿ ಐದು ಪ್ರಮುಖ ದೇವಾಲಯಗಳ ಕೆಲಸವನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಭಗವಾನ್ ರಾಮನನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿರುವುದರಿಂದ, ಮುಖ್ಯ ದೇವಾಲಯದ ನಾಲ್ಕು ಮೂಲೆಗಳಲ್ಲಿ ಗಣಪತಿ, ಶಿವ, ಸೂರ್ಯ ಮತ್ತು ಜಗದಂಬಾ ದೇವಿಗೆ ಸಮರ್ಪಿತವಾದ ದೇವಾಲಯಗಳನ್ನು ರಚಿಸಲಾಗುತ್ತದೆ.ಇದರೊಂದಿಗೆ, ದಂತಕಥೆಯ ಪ್ರಕಾರ, ರಾಮನ ಅತಿದೊಡ್ಡ ಭಕ್ತನಾದ ಭಗವಾನ್ ಹನುಮಂತನಿಗೆ ಪ್ರತ್ಯೇಕ ದೇವಾಲಯವನ್ನು ನಿರ್ಮಾಣ ಮಾಡಲಾಗುತ್ತದೆ. ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಖಜಾಂಚಿ ಆಗಿರುವ ಗುರುದೇವ್ ಗಿರಿಜಿ, ಸೀತಾ ರಸೋಯಿ ಬಳಿ, ಅನ್ನಪೂರ್ಣ ದೇವಿಗೆ ಸಮರ್ಪಿತವಾದ ದೇವಾಲಯವನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ರಾಮಮಂದಿರ ಸಂಕೀರ್ಣದ ಹೊರಗೆ ಸಂತ ವಾಲ್ಮೀಕಿ, ವಶಿಷ್ಟ, ವಿಶ್ವಾಮಿತ್ರ, ದೇವಿ ಶವಾರಿ ಮತ್ತು ಬೃಹತ್ ಪಕ್ಷಿ ಜಟಾಯು ದೇವಾಲಯಗಳನ್ನು ಸಹ ಸ್ಥಾಪನೆ ಮಾಡಲಾಗುತ್ತದೆ.