ಜಮ್ಮು: ನಿಯಂತ್ರಣ ತಪ್ಪಿ 700 ಅಡಿ ಕೆಳಗೆ ಉರುಳಿದ ಕಾರು: ಒಂದೇ ಕುಟುಂಬದ ನಾಲ್ವರ ದುರ್ಮರಣ


ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಕಾರು ರಸ್ತೆಯಿಂದ ಸ್ಕಿಡ್ ಆಗಿ ಆಳವಾದ ಕಮರಿಗೆ ಬಿದ್ದ ಪರಿಣಾಮ ಮಸೀದಿಯ ಇಮಾಮ್ ಮತ್ತು ಅವರ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಂಬನ್ ಜಿಲ್ಲೆಯ ಗೂಲ್-ಸಂಗಲ್ದನ್ ಗ್ರಾಮದಿಂದ ಕುಟುಂಬ ಸಮೇತರಾಗಿ ಜಮ್ಮುವಿಗೆ ತೆರಳುತ್ತಿದ್ದಾಗ ಬೆಳಗ್ಗೆ 8.30ರ ಸುಮಾರಿಗೆ ಉಧಂಪುರ ಜಿಲ್ಲೆಯ ಚೆನಾನಿ ಪ್ರದೇಶದ ಪ್ರೇಮ್ ಮಂದಿರದ ಬಳಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರು ಸೋಮವಾರ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯಿಂದ ಸ್ಕಿಡ್ ಆಗಿ 700 ಅಡಿ ಕಮರಿಗೆ ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜಾಮಿಯಾ ಮಸೀದಿ ಸಂಗಲ್ದಾನ್‌ನ ಇಮಾಮ್ (ಪ್ರಾರ್ಥನಾ ನಾಯಕ), ಮುಫ್ತಿ ಅಬ್ದುಲ್ ಹಮೀದ್ (32) ಮತ್ತು ಅವರ ತಂದೆ ಮುಫ್ತಿ ಜಮಾಲ್ ದಿನ್ (65) ಸ್ಥಳದಲ್ಲೇ ಮೃತಪಟ್ಟರೆ, ಅವರ ತಾಯಿ ಹಜ್ರಾ ಬೇಗಂ (60) ಮತ್ತು ಸೋದರಳಿಯ ಆದಿಲ್ ಗುಲ್ಜಾರ್ (16) ಅವರನ್ನು ರಕ್ಷಿಸಿ ಉಧಂಪುರ ಜಿಲ್ಲೆಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದಾಗ್ಯೂ, ಗಾಯಾಳುಗಳಿಬ್ಬರೂ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಎಲ್ಲಾ ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯ ಶವಾಗಾರ ಕೊಠಡಿಗೆ ಸ್ಥಳಾಂತರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!