ಚಾರ್​ಧಾಮ್​ ಯಾತ್ರೆ: 57 ಜನ ಯಾತ್ರಿಕರ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪ್ರಸಿದ್ಧ ಚಾರ್​ಧಾಮ್​ ಯಾತ್ರೆಯಲ್ಲಿ ಇದುವರೆಗೆ 57 ಜನ ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಬಹುತೇಕ ಜನರು ಹೃದಯಾಘಾತ ಮತ್ತು ಯಾತ್ರಾ ಮಾರ್ಗಗಳಲ್ಲಿ ಮೌಂಟೇನ್ ಸಿಕ್‌ನೆಸ್​ನಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಉತ್ತರಾಖಂಡದ ಆರೋಗ್ಯ ಇಲಾಖೆಯ ಮಹಾ ನಿರ್ದೇಶಕಿ ಶೈಲಜಾ ಭಟ್, ಪ್ರಸ್ತುತ ಪ್ರಯಾಣದ ಮಾರ್ಗಗಳಲ್ಲಿ ಯಾತ್ರಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಈ ವೇಳೆ ತೊಂದರೆ ಕಂಡು ಬರುವವರಿಗೆ ಮುಂದೆ ತೆರಳದಂತೆ ಸಲಹೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಮೇ. ೩ ರಂದು ಗಂಗೋತ್ರಿ ಮತ್ತು ಯಮುನೋತ್ರಿ ಪೋರ್ಟಲ್​​ಗಳನ್ನು ತೆರೆಯುವುದರೊಂದಿಗೆ ಚಾರ್​ಧಾಮ್ ಯಾತ್ರೆ ಆರಂಭವಾಗಿತ್ತು. ಮೇ 6ರಂದು ಕೇದಾರನಾಥ ಮತ್ತು ಮೇ 8ರಂದು ಬದ್ರಿನಾಥ ಬಾಗಿಲು ತೆರೆಯಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!