Tuesday, September 23, 2025

WEATHER | ಬೆಂಗಳೂರು ಸೇರಿ, ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಂದು ವಾರ ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ಸೇರಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಷ್ಟೇ ಅಲ್ಲದೆ ಉತ್ತರ ಒಳನಾಡಿನಲ್ಲಿ ಭಾರಿ ಮಳೆಯಾಗಲಿದ್ದು, 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 27ರ ಬಳಿಕ ಭಾರಿ ಮಳೆಯಾಗಲಿದೆ.

ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.

ತಿಡಗುಂಡಿ, ಬಿಳಗಿ, ಕೆರೂರು, ಮಾನ್ವಿ, ಯಡ್ರಾಮಿ, ಕುಷ್ಟಗಿ, ಆಲಮಟ್ಟಿ, ದೇವರಹಿಪ್ಪರಗಿ, ಗುಳೇಗೋಡು, ಅಫ್ಝಲ್​ಪುರ, ಅಣ್ಣಿಗೆರೆ, ಬೆಳ್ಳೂರು, ಗುರುಮಿಟ್ಕಲ್, ಸೈದಾಪುರ, ಶೋರಾಪುರ, ಝಲ್ಕಿ, ಆಗುಂಬೆ, ಔರಾದ್, ಬಸವನಬಾಗೇವಾಡಿ, ಗಬ್ಬೂರು, ಗೋಪಾಲನಗರ, ಕೆಂಭಾವಿ, ಲೋಕಾಪುರ, ಸೇಡಂ, ವಿಜಯಪುರ, ಬೀದರ್, ಗದಗ, ಗಂಗಾವತಿ, ಗೋಕರ್ಣ, ಹುಂಚದಕಟ್ಟೆ, ಕಲಬುರಗಿ, ಕಮ್ಮರಡಿ, ಕೊಟ್ಟಿಗೆಹಾರ, ಕುರ್ಡಿ, ನಂಜನಗೂಡು, ಪುತ್ತೂರು, ರಾಯಲ್ಪಾಡು, ಪುತ್ತೂರು, ಯಲಬುರ್ಗಾದಲ್ಲಿ ಮಳೆಯಾಗಿದೆ.

ಇದನ್ನೂ ಓದಿ