ದಿಗಂತ ವರದಿ ರಾಮನಗರ :
ರಾಜ್ಯ ಸರ್ಕಾರ ಇಂದೇ ಡಿ.ಕೆ. ಸಹೋದರರನ್ನು ಬಂಧಿಸಿ ಮೇಕೆದಾಟು ಪಾದಯಾತ್ರೆಗೆ ತಡೆ ಒಡ್ಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ,’ ಸದ್ಯ ನಡೆದಿರುವ ಪಾದಯಾತ್ರೆಯು ಡಿಕೆಶಿ ಡ್ರಾಮಾ ಡ್ಯಾನ್ಸ್. ಇದಕ್ಕೆ ಗಂಭೀರತೆ ಎನ್ನುವುದೇ ಇಲ್ಲ. ಸರ್ಕಾರ ಇಂದೇ ಇದಕ್ಕೆ ತಡೆ ಒಡ್ಡದೇ ಹೋದರೆ ನಮ್ಮದು ದುರ್ಬಲ ಸರ್ಕಾರ ಎಂಬ ಅಭಿಪ್ರಾಯ ಬರುತ್ತದೆ. ಹೀಗಾಗಿ ಮುಖ್ಯಮಂತ್ರಿಗಳು ಕೂಡಲೇ ಪಾದಯಾತ್ರೆ ತಡೆಯಬೇಕು. ಇಲ್ಲವಾದರೆ ಬಿಜೆಪಿ ಕಾರ್ಯಕರ್ತರೇ ರಸ್ತೆಗೆ ಇಳಿದು ಪಾದಯಾತ್ರೆ ತಡೆಯುತ್ತೇವೆ ಎಂದರು.
ಡಿ.ಕೆ. ಶಿವಕುಮಾರ್ ಗೆ ಕಾನೂನು ಬಗ್ಗೆ ಗೌರವ ಇಲ್ಲ. ಎಫ್ ಐಆರ್ ದಾಖಲಿಸಿದ ಮೇಲೂ ಹೊರ ಜಿಲ್ಲೆಗಳಿಂದ ದುಡ್ಡು ಕೊಟ್ಟು ಜನರನ್ನು ಕರೆಯಿಸಿ ಕೊರೊನಾ ಹಂಚುತ್ತಿದ್ದಾರೆ ಎಂದು ಆರೋಪಿಸಿದರು.