ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಪ್ರಾರಂಭವಾದ ಹಿಜಾಬ್ ವಿವಾದ ಈಗ ರಾಜಸ್ಥಾನಕ್ಕೂ ತಲುಪಿದೆ.
ರಾಜಸ್ಥಾನದ ಜೈಪುರದ ಚಕ್ಸು ಎಂಬಲ್ಲಿನ ಖಾಸಗಿ ಕಾಲೇಜೊಂದು ಶುಕ್ರವಾರ ಬುರ್ಖಾ ಧರಿಸಿ ಬಂದಿದ್ದ ಕೆಲವು ವಿದ್ಯಾರ್ಥಿನಿಯರನ್ನು ಕಾಲೇಜು ಪ್ರವೇಶ ಪಡೆಯಲು ನಿರಾಕರಿಸಿರುವ ಘಟನೆ ನಡೆದಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ವಿರುದ್ದ ಆಕ್ರೋಶ್ ವ್ಯಕ್ತಪಡಿಸಿದ ವಿದ್ಯಾರ್ಥಿನಿಯರು, ಸ್ಥಳಕ್ಕೆ ತಮ್ಮ ಕುಟುಂಬಸ್ಥರನ್ನು ಕರೆದಂದು ನ್ಯಾಯಯುತ ಹಕ್ಕು ನೀಡಬೇಕೆಂದು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆಯ ಘೋಷಣೆ ಕೂಗಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಚಕ್ಸು ಪೊಲೀಸ್ ಠಾಣಾ ಅಧಿಕಾರಿ ಜಿತೇಂದ್ರ ಕುಮಾರ್ ವರ್ಮಾ ಜನರನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್ ಶಾಸಕ ವಾಜಿಬ್ ಅಲಿ, ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆಗೆ ಹಿಜಾಬ್ ಧರಿಸಲು ಅವಕಾಶವಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗಮನ ಹರಿಸಿ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
आज जयपुर के चाकसू कस्बे में कस्तूरी देवी कॉलेज मे मुस्लिम छात्राओं को हिजाब मे प्रवेश नहीं दिये जाने की खबर मिली है,नफ़रत के सोदाग़र अब राजस्थान में भी ज़हर घोलना चाहते हैं.में श्री @ashokgehlot51 जी से माँग करता हूँ की इस घटना का संज्ञान लेकर ऐसे कोलेज पर सख़्त कार्यवाही हो. pic.twitter.com/vOYjYDVqO0
— Wajib Ali MLA (@aliwajib) February 11, 2022