ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಜಾಬ್ ವಿವಾದ ಕುರಿತ ಹೇಳಿಕೆಗೆ ಕ್ಷಮೆ ಯಾಚಿಸುವಂತೆ ಜಮೀರ್ ಅಹ್ಮದ್ ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದು, ಈ ಕುರಿತು ಜಮೀರ್ ಪ್ರತಿಕ್ರಿಯೆ ನೀಡಿದ್ದಾರೆ.
ಹಿಜಾಬ್ ಧರಿಸಬೇಕು ಎಂದು ನಾನು ಹೇಳಿದ್ದೆ. ಕ್ಷಮೆ ಕೇಳುವಂತಹ ಹೇಳಿಕೆಯನ್ನು ನಾನು ನೀಡಿಲ್ಲ, ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಶಾಸಕ ಜಮೀರ್ ಸಮರ್ಥಿಸಿಕೊಂಡಿದ್ದಾರೆ.
ಹೆಲ್ಮೆಟ್ ಧರಿಸುವಂತೆಯೇ ಹಿಜಾಬ್ ಧರಿಸಬೇಕು. ಹೆಲ್ಮೆಟ್ ಹೇಗೆ ಸೇಫ್ಟಿ ಎಂದು ಪರಿಗಣಿಸುತ್ತಾರೋ ಹಾಗೇ ಹಿಜಾಬ್ ಕೂಡ ಸೇಫ್ಟಿ ನೀಡುತ್ತೆ ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ಹೆಲ್ಮೆಟ್ ನ್ನು ಕೆಲ ಬೈಕ್ ಸವಾರರೇ ಹಾಕಲ್ಲ, ಅದೇ ರೀತಿ ಹಿಜಾಬ್ ನ್ನು ಕೂಡ ಬಹಳ ಜನರು ಹಾಕಲ್ಲ ಎಂದಿದ್ದೇನೆ. ಈ ವಿಚಾರದಲ್ಲಿ ಕ್ಷಮೆ ಕೇಳುವ ಅಗತ್ಯವೆನಿದೆ ಎಂದಿದ್ದಾರೆ.