ಹೊಸದಿಗಂತ ವರದಿ,ಕಲಬುರಗಿ:
ಐದು ವರ್ಷಗಳ ಅವಧಿಯಲ್ಲಿ ನೀಡಿದ ಜನಪರ ಯೋಜನೆಗಳ ಮೂಲಕ ರಾಜ್ಯದ ಜನತೆಯ ಮುಂದೆ ಮತ್ತೊಮ್ಮೆ ಆಶೀರ್ವಾದ ಪಡೆಯಲು ನಮ್ಮ ಪಕ್ಷ ಸಿದ್ದವಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಅವರು ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಬಿಜೆಪಿ ಕಾಯ೯ಕತ೯ರ ವಿಭಾಗ ಮಟ್ಟದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿ ಬೀಜವನ್ನು ಬಿತ್ತಿದ್ದೇವೆ. ಸೂರ್ಯ ಚಂದ್ರ ಇರುವುದೆಷ್ಟೂ ಸತ್ಯವೋ,ಅಷ್ಟೆ ಸತ್ಯ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಎಂದರು.
ಕಾಂಗ್ರೆಸ್ ಪಕ್ಷ ವಿನಾಕಾರಣ ಆರೋಪ ಮಾಡಿ,ಜನರ ದಾರಿಯನ್ನು ತಪ್ಪಿಸುವ ಕೆಲಸ ಮಾಡುತ್ತಿದೆ. ಭ್ರಷ್ಟಾಚಾರದ ಸರಮಾಲೆಯನ್ನು ಹಾಕಿಕೊಂಡು ತಿರುಗಾಡುವ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಮೇಲೆ ಆರೋಪ ಮಾಡುವ ಯಾವ ನೈತಿಕತೆಯೂ ಇಲ್ಲವೆಂದರು.
ಆಥಿ೯ಕ ಸಂಕಷ್ಟವಿದ್ದರೂ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಜನಪರವಾದ ಬಜೆಟ್ ಮಂಡನೆ ಮಾಡಿದ್ದಾರೆ. 200 ಕಿಂತಲೂ ಅಧಿಕ ಯೋಜನೆಗಳನ್ನು ಜನರಿಗೆ ತಲುಪಿಸಿ ಸೈ ಎನಿಸಿಕೊಂಡಿರುವ ಸಕಾ೯ರ ನಮ್ಮದು ಎಂದ ಅವರು, ಕಾಂಗ್ರೆಸ್ ಪಕ್ಷ ಈಗಲಾದರೂ ಸುಳ್ಳು ಆರೋಪ ಮಾಡುವುದು ಬಿಡಲಿ ಎಂದರು.
ದಲಿತರ ಬಗ್ಗೆ ಹಿಂದೂಳಿದವರ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷ, ಅವರಿಗಾಗಿ ಎನೂ ಮಾಡಿದೆ ಎಂದು ಹೇಳಲಿ.ಅತೀ ಹೆಚ್ಚು ದಲಿತ ಶಾಸಕರು,ಹಿಂದೂಳಿದ ಶಾಸಕರು ನಮ್ಮ ಪಕ್ಷದಲ್ಲಿ ಇದ್ದಾರೆ ಎಂದರು.
ಮುಂಬರುವ ಸಾವ೯ತ್ರಿಕ ಚುನಾವಣೆಯಲ್ಲಿ ನಮ್ಮ ಪಕ್ಷದ ಗುರಿ 150 ಸ್ಥಾನಗಳನ್ನು ಗೆದ್ದು, ರಾಜ್ಯದಲ್ಲಿ ಪಾರದರ್ಶಕ ಆಡಳಿತ ನೀಡಲಿದ್ದೇವೆ ಎಂದು ಹೇಳಿದರು.