ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಾಲಿವುಡ್ ನಟಿ ಕಂಗನಾ ರಣಾವತ್ ವಾಗ್ದಾಳಿ ನಡೆಸಿದ್ದಾರೆ.
ಜೋಧ್ಪುರದಲ್ಲಿ ನಡೆದ ಎರಡು ಸಮುದಾಯಗಳ ನಡುವಿನ ಘರ್ಷಣೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಕಂಗನಾ, ಗಲಭೆಗಳನ್ನು ನಿಯಂತ್ರಿಸುವ ಸರ್ಕಾರ ರಾಜ್ಯದಲ್ಲಿ ಬರಬೇಕೆಂದು ಹೇಳಿದ್ದಾರೆ.
ರಾಜಸ್ಥಾನದಲ್ಲಿ ಬದಲಾವಣೆ ತರಬೇಕಿದೆ. ಇಲ್ಲಿ ಬದಲಾವಣೆಯಾದರೆ ಕೋಮು ಗಲಭೆಗಳ ನಿಯಂತ್ರಿಸುವ ಸರ್ಕಾರವನ್ನು ತರಬಹುದು. ಅಗತ್ಯವಿದ್ದರೆ ನಾನೇ ನಿಮಗೆ (ರಾಜಸ್ಥಾನ ಸರ್ಕಾರಕ್ಕೆ) ಉತ್ತರ ಪ್ರದೇಶದಿಂದ ಬುಲ್ಡೋಜರ್ಗಳನ್ನು ಕಳುಹಿಸುತ್ತೇನೆ ಎಂದಿದ್ದಾರೆ.
ನೀವು ರಾಜಕೀಯಕ್ಕೆ ಸೇರುತ್ತೀರಾ ಎಂಬ ಪ್ರಶ್ನೆಗೆ ಕಂಗನಾ, ಸದ್ಯ ಅಂತಹ ಯಾವುದೇ ಯೋಚನೆ ಇಲ್ಲ . ತನ್ನ ವೃತ್ತಿ ಜೀವನದಲ್ಲಿ ಈ ಹಂತವನ್ನು ತಲುಪಲು ಸಾಕಷ್ಟು ಹೋರಾಟಗಳನ್ನು ಎದುರಿಸಿದ್ದೇನೆ. ರಾಜಕೀಯಕ್ಕೆ ಪ್ರವೇಶಿಸುವುದು ಮತ್ತೊಂದು ಹೋರಾಟವಾಗಲಿದೆ. ನಾನು ಅದಕ್ಕೆ ಪ್ರಸ್ತುತ ಸಿದ್ಧಳಿಲ್ಲ ಎಂದು ಸ್ಪಷ್ಟಪಡಿಸಿದರು.