ಮಂಗಳೂರಿನಲ್ಲಿ ಭಾರೀ ಮಳೆ: ಮರವೂರು ಸೇತುವೆ ಬಳಿ ಕುಸಿತ, ನದಿಯಂತಾಗಿವೆ ರಸ್ತೆಗಳು..

ಹೊಸದಿಗಂತ ವರದಿ ಮಂಗಳೂರು:
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ಬೆಳಗ್ಗಿನಿಂದಲೇ ಧಾರಾಕಾರ ಮಳೆಯಾಗುತ್ತಿದೆ. ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮಂಗಳೂರು ವಿಮಾನ ನಿಲ್ದಾಣ ಸಂಪರ್ಕಿಸುವ ಮರವೂರು ಸೇತುವೆ ಬಳಿ ಭೂ ಕುಸಿತ ಉಂಟಾಗಿದ್ದು, ಆತಂಕ ಸೃಷ್ಟಿಯಾಗಿದೆ.
ಕಳೆದ ವರ್ಷ ಕೂಡ ಮರವೂರು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡು ಸಂಚಾರ ಸ್ಥಗಿತಗೊಂಡಿತ್ತು. ಈ ಬಾರಿ ಕೂಡ ಮಳೆ ಬಿರುಸು ಪಡೆಯುತ್ತಿದ್ದಂತೆ ಆತಂಕ ಎದುರಾಗಿದೆ.ರಸ್ತೆಗೆ ಮಣ್ಣು ಬಿದ್ದು ಸಂಚಾರಕ್ಕೆ ತೊಡಕಾದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಜಿಲ್ಲೆಯ ಹಲವೆಡೆ ಭಾರೀ ಮಳೆತಾಗುತ್ತಿದ್ದು, ನೀರುಮಾರ್ಗದ ದೇವಸ್ಥಾನವೊಂದು ಜಲಾವೃತಗೊಂಡಿದೆ. ಬಹುತೇಕ ಮನೆಗಳ ಸುತ್ತ ಜಲಾವೃತದಿಂದಾಗಿ ದ್ವೀಪದ ಸ್ಥಿತಿ ನಿರ್ಮಾಣವಾಗಿದೆ.

ಮಂಗಳೂರು ಸಮೀಪದ ನೀರುಮಾರ್ಗದ ಬದಿನಡಿ ಕ್ಷೇತ್ರ ಜಲಾವ್ರತಗೊಂಡಿರುವುದು.

ಮಂಗಳೂರು ಪಡಿಲ್-ಕಣ್ಣೂರು ಹೆದ್ದಾರಿಯಲ್ಲಿ ಕೃತಕ ನೆರೆ…

ಮಂಗಳೂರಿನ ಕೊಟ್ಟಾರ, ಜಪ್ಪಿನಮೊಗರು ಸೇರಿದಂತೆ ಹಲವೆಡೆ ಜಲಾವ್ರತ. ನದಿಯಂತಾಗಿವೆ ಮಂಗಳೂರ ರಸ್ತೆಗಳು

ಪೆರ್ಮಂಕಿ-ಮಂಗಳೂರು ರಸ್ತೆಯಲ್ಲಿ ಮರ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!