ಹೊಸದಿಗಂತ ವರದಿ,ಉಡುಪಿ:
ಬರೋಬ್ಬರಿ ಏಳು ದಿನದ ನಂತರ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳು ಮಂಗಳವಾರದಿಂದ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ತಿಳಿಸಿದ್ದಾರೆ.
ಕಳೆದೊಂದು ವಾರದಿಂದ ಸುರಿಯುತ್ತಿರುವ ಎಡಬಿಡದೇ ಮಳೆಯಿಂದಾಗಿ ಜಿಲ್ಲೆಯಲ್ಲಿ ಏಳು ದಿನಗಳು ಶಾಲಾ ಕಾಲೇಜಿಗೆ ರಜೆ ಲಭಿಸಿತ್ತು. ಆದರೆ ಸೋಮವಾರ ಜಿಲ್ಲೆಯಲ್ಲಿ ಮಳೆಯೂ ಕೊಂಚ ವಿರಾಮ ನೀಡಿದ್ದು, ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ರೆಡ್ ಅಲರ್ಟ್ ನಿಂದ ಆರೇಂಜ್ ಅಲರ್ಟ್ ಗೆ ಜಿಲ್ಲೆಯೂ ಪರಿವರ್ತನೆಯಾಗಿದೆ ಎಂದು ಹವಾಮಾನ ಇಲಾಖೆಯೂ ಸೂಚನೆ ನೀಡುರುವುದರಿಂದ ಶಾಲಾ ಕಾಲೇಜ್ ಗಳನ್ನು ಆರಂಭಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.