ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು-ಕಾಶ್ಮೀರದ ಅಭಿವೃದ್ಧಿಯಲ್ಲಿ 370ನೇ ವಿಧಿಯಿಂದ ಯಾವುದೇ ಅಡಚಣೆ ಉಂಟಾಗಿರಲಿಲ್ಲ ಎಂದು ಇತ್ತೀಚೆಗೆ ಕಾಂಗ್ರೆಸ್ಗೆ ರಾಜೀನಾಮೆ ನೀಡಿರುವ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಒತ್ತಿ ಹೇಳಿದ್ದಾರೆ.
ಇದೇ ವೇಳೆ ಈ ಹಿಂದೆ ಕಣಿವೆ ರಾಜ್ಯ ವಿಶೇಷ ಸ್ಥಾನಮಾನವಿದ್ದಾಗ ರಾಷ್ಟ್ರೀಯ ಸೂಚ್ಯಂಕದಲ್ಲಿ 30 ರಾಜ್ಯಗಳ ಪೈಕಿ ಜಮ್ಮು-ಕಾಶ್ಮೀರ ಉತ್ತಮ ರೀತಿಯಲ್ಲಿಯೇ ಪ್ರದರ್ಶನ ನೀಡಿತ್ತು ಎಂದು ಪ್ರತಿಪಾಧಿಸಿದ್ದಾರೆ.
370ನೇ ವಿಧಿ ಮರುಸ್ಥಾಪನೆಯ ಸಾಧ್ಯತೆ ಬಗ್ಗೆ ತಾವು ಎಂದಿಗೂ ತಳ್ಳಿಹಾಕಿಲ್ಲ ಎಂದ ಮಾಜಿ ಸಿಎಂ, ಆದರೆ, ಇದು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದ್ದು ಕೇವಲ ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ತಕ್ಷಣದ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ.