ಹೊಸದಿಗಂತ ವರದಿ ಗದಗ:
ಇತ್ತಿಚಿಗೆ ಸುರಿದ ಭಾರೀ ಮಳೆಯಿಂದ ರಸ್ತೆ ಕೊಚ್ಚಿಹೋಗಿ ರಸ್ತೆ ಮಧ್ಯ ನಿರ್ಮಾಣವಾಗಿದ್ದ ಕಂದಕದಲ್ಲಿ ಬಿದ್ದು ಇಬ್ಬರು ಯುವಕರು ಮೃತ ಪಟ್ಟಿರುವ ಘಟನೆ ತಾಲ್ಲೂಕಿನ ನಾಗಾವಿ ತಾಂಡಾದ ಮಧ್ಯ ಹೊರವಲಯದಲ್ಲಿ ಬುಧವಾರ ಜರುಗಿದೆ.
ಲಕ್ಕುಂಡಿ ಗ್ರಾಮದ ಮಂಜುನಾಥ್ ಮಾದರ (19), ಬಸವರಾಜ್ ಜವಳಬೆಂಚಿ (17) ಮೃತ ದುರ್ದೈವಿಗಳು. ಲಕ್ಕುಂಡಿ ಗ್ರಾಮದಿಂದ ಎಲಿಸಿರುಂದ ಗ್ರಾಮಕ್ಕೆ ಸಂಬಂಧಿಕರ ಮನೆಗೆ ಹೊರಟಿದ್ದ ಇಬ್ಬರೂ ಕಂದಕದಲ್ಲಿ ಬಿದ್ದು ಮೃತ ಪಟ್ಟಿದ್ದಾರೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಕುಟುಂಬಸ್ಥರಿಗೆ ಕೂಡಲೇ ಸರ್ಕಾರ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಬಿಜೆಪಿ ಯುವ ಮುಖಂಡ ಪರಮೇಶ ನಾಯಕ ಆಗ್ರಹಿಸಿದ್ದಾರೆ.