ಕಲಬುರಗಿಯಲ್ಲಿ ಸಿಡಿಲಬ್ಬರಕ್ಕೆ 18 ಗೋವುಗಳ ಸಾವು

ಹೊಸದಿಗಂತ ವರದಿ,ಕಲಬುರಗಿ:

ಧಾರಾಕಾರವಾಗಿ ಸುರಿದ ಮಳೆಯ ಮಧ್ಯದಲ್ಲಿ ಗುಡುಗು, ಸಿಡಿಲಿನಿಂದ 18 ಗೋವುಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಾಳಗಿ ತಾಲೂಕಿನ ಲಕ್ಷ್ಮಣನಾಯಕ್ ತಾಂಡಾದಲ್ಲಿ ಬುಧವಾರ ಸಂಜೆ ನಡೆದಿದೆ.

ಬುಧವಾರ ಮಧ್ಯಾಹ್ನ ಧಾರಾಕಾರವಾಗಿ ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಾಗಿದ್ದು,ಸಿಡಿಲು ಬಡಿದು ಆಕಳುಗಳು ಸಾವನ್ನಪ್ಪಿವೆ.

9 ರೈತರಿಗೆ ಸೇರಿದ 17 ಲಕ್ಷ ರೂಪಾಯಿ ಮೌಲ್ಯದ ಆಕಳುಗಳಾಗಿದ್ದು ,ಸ್ಥಳಕ್ಕೆ ಪಶು ಆಸ್ಪತ್ರೆ ವೈದ್ಯರು ಮತ್ತು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!