‘ಪುನೀತ್ ಪರ್ವ’ ಆರಂಭಕ್ಕೆ ಕ್ಷಣಗಣನೆ: ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ ರಾಘಣ್ಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಇಂದು ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ‘ಪುನೀತ್ ಪರ್ವ’ ಕಾರ್ಯಕ್ರಮ ಇನ್ನು ಕೆಲವೇ ಕ್ಷಣದಲ್ಲಿ ಆರಂಭವಾಗಲಿದ್ದು, ಈ ಕಾರ್ಯಕ್ರಮ ಆರಂಭಕ್ಕೂ ಮುನ್ನ ನಟ ರಾಘವೇಂದ್ರ ರಾಜ್ ಕುಮಾರ್ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ.

ಅಪ್ಪು ಹಾಡಿದ ಹಾಡನ್ನು ನಾನು ಹೇಳುತ್ತೇನೆ, ಶಿವಣ್ಣ ಡ್ಯಾನ್ಸ್ ಮಾಡುತ್ತಾರೆ, ಕುನಾಲ್ ಗಾಂಜಾವಾಲ್ ಎಲ್ಲರೂ ಇರ್ತಾರೆ, ಆದರೆ ಹೃದಯ ಪೂರ್ವಕವಾಗಿ ನೀವು ಕಾರ್ಯಕ್ರಮವನ್ನು ಚೆನ್ನಾಗಿ ನಡೆಸಿಕೊಡಬೇಕು ಎಂದು ಮನವಿ ಮಾಡಿದರು.

ಅಪ್ಪು ನಮ್ಮನ್ನು ಬಿಟ್ಟು ಹೋದಾಗಿನಿಂದ ಏನೂ ಸಮಸ್ಯೆ ಆಗದ ಹಾಗೆ ಸಹಕಾರ ನೀಡಿದ್ದೀರಿ. ಅದೇ ರೀತಿ ಇಂದು ಕೂಡ ನೀವು ನಮಗೆ ವಿಶೇಷ ಸಹಕಾರ ನೀಡಬೇಕು. ಇದು ನಿಮ್ಮದೇ ಕಾರ್ಯಕ್ರಮ , ಎಲ್ಲರೂ ಸಹಕರಿಸಿ ಎಂದು ನಟ ರಾಘವೇಂದ್ರ ರಾಜ್ ಕುಮಾರ್ ಮನವಿ ಮಾಡಿದ್ದಾರೆ.

‘ಪುನೀತ್ ಪರ್ವ’ ಕಾರ್ಯಕ್ರಮಕ್ಕೆ ಭಾರತ ಚಿತ್ರರಂಗದ ಖ್ಯಾ ತ ಗಣ್ಯರು ಕಾರ್ಯಕ್ರಮಕ್ಕೆ ಧಾವಿಸುತ್ತಿದ್ದು, ನಟರಾದ ಸೂರ್ಯ, ಪ್ರಭುದೇವ್, ಸಿದ್ದಾರ್ಥ್ ಸೇರಿದಂತೆ ಹಲವರು ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದಾರೆ.

ಅರ್ಮಾನ್ ಮಲ್ಲಿಕ್, ಗುರುಕಿರಣ್, ಕುನಾಲ್ ಗಾಂಜಾವಾಲಾ ರವರಿಂದ ಗಾಯನ ಕಾರ್ಯಕ್ರಮ ನಡೆಯಲಿದ್ದು, ರಮ್ಯಾ, ಶಿವರಾಜ್ ಕುಮಾರ್ ಸೇರಿದಂತೆ ಹಲವು ಸ್ಯಾಂಡಲ್ ವುಡ್ ನಟ ನಟಿಯರು ಹೆಜ್ಜೆ ಹಾಕಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!