ಹೊಸದಿಗಂತ ವರದಿ ಕಲಬುರಗಿ:
ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಾಂಗ್ರೆಸ್,ನ ಸತೀಶ್ ಜಾರಕಿಹೊಳಿ ಹಿಂದೂ ಧರ್ಮದ ವಿರೋಧಿಯಾಗಿದ್ದಾರೆ ಎಂದು ಹಿಂದೂ ಜಾಗೃತಿ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ ಸ್ವಾದಿ ಹೇಳಿದರು.
ಅವರು ಬುಧವಾರ ನಗರದ ಸದಾ೯ರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸತೀಶ್ ಜಾರಕಿಹೊಳಿ ವಿರುದ್ಧ ಆಕ್ರೋಶ ಹೊರಹಾಕಿ, ಹಿಂದೂ ಧರ್ಮದಲ್ಲಿ ಹುಟ್ಟಿ,ಅದರ ವಿರುದ್ಧ ಅವಹೇಳನಕಾರಿ ಮಾತನಾಡಿದ ಜಾರಕಿಹೊಳಿ, ಗೆ ದಿಕ್ಕಾರ ಹೇಳಿದರು.
ಸತೀಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ವಜಾಗೊಳಿಸಿ,ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದು,ಕೂಡಲೇ ಅವರನ್ನು ಗಡಿಪಾರು ಮಾಡಬೇಕು ಎಂದರು.
ಬಹಿರಂಗವಾಗಿ ಸತೀಶ್ ಜಾರಕಿಹೊಳಿ ಅವರು ಹಿಂದೂಗಳಿಗೆ ಬೇಷರತ್ತಾಗಿ ಕ್ಷಮೇ ಕೆಳಬೇಕು.ಇಲ್ಲವಾದರೆ ಮುಂದೆ ಕಲಬುರಗಿ,ಗೆ ಬಂದಾಗ ಅವರ ಮುಖಕ್ಕೆ ಮಸಿ ಬಳೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎಂ.ಎಸ್.ಪಾಟೀಲ್ ನರಿಬೊಳ, ಸಂತೋಷ ಸೋನವಾಣಿ,ದಶರಥ ಇಂಗೋಳೆ,ತನಿಷ್ ಗಾಜರೆ,ಸುನೀಲ್ ರಾಠೋಡ್, ಪವನ್ ಕದಮ್,ಸಂಗಮೇಶ ಕಾಳನೂರ,ಉದಯ ಸುಲ್ತಾನಪುರ ಸೇರಿದಂತೆ ಹಲವರು ಇದ್ದರು.