ಕಲಬೆರಕೆ ಮದ್ಯ ಸೇವಿಸಿ ಪ್ರಾಂಶುಪಾಲ ಸೇರಿದಂತೆ ಮೂವರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಹಾರದಲ್ಲಿ ಮದ್ಯಪಾನ ನಿಷೇಧ ಜಾರಿಯಲ್ಲಿದೆ. ಆದರೆ, ರಾಜ್ಯದೆಲ್ಲೆಡೆ ಮದ್ಯ ಉತ್ಪಾದನೆಯಾಗುತ್ತಿದ್ದು, ಕೈದಿಗಳೊಂದಿಗೆ ಮದ್ಯ ಸೇವಿಸಿದ್ದಕ್ಕಾಗಿ ಮೇಲಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರಿಂದ ಮದ್ಯಪಾನ ನಿಷೇಧವಾಗಿರುವ ಬಿಹಾರದಲ್ಲಿ ಪೊಲೀಸರು ಪೊಲೀಸರನ್ನು ಬಂಧಿಸುವ ಸ್ಥಿತಿ ನಿರ್ಮಾಣವಾಗಿತ್ತು.

ಇದೇ ವೇಳೆ ಕಲಬೆರಕೆ ಮದ್ಯ ಸೇವಿಸಿ ಶಾಲೆಯ ಪ್ರಾಂಶುಪಾಲರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. 2016ರಲ್ಲಿ ಸರ್ಕಾರ ಸಂಪೂರ್ಣ ಮದ್ಯಪಾನ ನಿಷೇಧ ಹೇರಿತ್ತು. ಆದರೆ, ರಾಜ್ಯದಲ್ಲಿ ಮದ್ಯ ಉತ್ಪಾದನೆಯಾಗುತ್ತಿದೆ. ವೈಶಾಲಿ ಜಿಲ್ಲೆಯ ಮೆಹನೇರ್ ನಲ್ಲಿ ನಡೆದ ಔತಣಕೂಟಕ್ಕೆ ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರು ಬಂದಿದ್ದರು. ಆ ಔತಣಕೂಟದಲ್ಲಿ ಹಲವರು ಮದ್ಯ ಸೇವಿಸಿದರು ಊಟದ ಬಳಿಕ ಪ್ರಾಂಶುಪಾಲರು ಅಸ್ವಸ್ಥರಾಗಿ ಸಾವನ್ನಪ್ಪಿದ್ದಾರೆ. ಇವರ ಸಾವಿನೊಂದಿಗೆ ಅದೇ ಪಾರ್ಟಿಗೆ ಬಂದು ಮದ್ಯ ಸೇವಿಸಿದ್ದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

ಈ ಸಾವುಗಳ ಬಗ್ಗೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಗ್ರಾಮದಲ್ಲಿ ಯಾರಾದರೂ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರೆ ಅಥವಾ ಮದ್ಯಪಾನ ಮಾಡಿ ಸಾವನ್ನಪ್ಪಿದ್ದರೆ ಅವರ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಜನರಿಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!