ಪವನ್ ಖೇರಾರನ್ನು ವಿಮಾನ ಹತ್ತದಂತೆ ತಡೆದ ದೆಹಲಿ ಪೊಲೀಸರು: ಸ್ಥಳದಲ್ಲೇ ಪ್ರತಿಭಟನೆಗಿಳಿದ ಕೈ ನಾಯಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಪವನ್ ಖೇರಾ ಅವರನ್ನು ಇಂಡಿಗೋ ವಿಮಾನ ಹತ್ತದಂತೆ ದೆಹಲಿ ಪೊಲೀಸರು ತಡೆದ‌ ಘಟನೆ ನಡೆದಿದೆ. ಪವನ್ ಖೇರಾ ಅವರನ್ನು ತಡೆಯುವಂತೆ ಅಸ್ಸಾಂ ಪೊಲೀಸರಿಂದ ಮನವಿ ಸ್ವೀಕರಿಸಿದ ನಂತರ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತುವುದನ್ನು ತಡೆಯಲಾಯಿತು ಎಂದು ದೆಹಲಿ ಪೊಲೀಸರು ಸ್ಪಷ್ಟನೆ ಕೊಟ್ಟಿದ್ದಾರೆ.

ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ರಾಯಪುರಕ್ಕೆ ಹೊರಟಿದ್ದ ಪವನ್ ಖೇರಾ ಅವರನ್ನು ವಿಮಾನ ಹತ್ತದಂತೆ ತಡೆದಿದ್ದಾರೆ. ವಿಮಾನದಲ್ಲಿ ಎಲ್ಲರೂ ಕುಳಿತಿದ್ದ ವೇಳೆ ಕೆಳಗಿಳಿಯುವಂತೆ ತಾಕೀತು ಮಾಡಿದ್ದಾರೆ. ʻಈ ಸರ್ವಾಧಿಕಾರವನ್ನು ಸಹಿಸುವುದಿಲ್ಲ, ನಾವು ಹೋರಾಡಿ ಗೆಲ್ಲುತ್ತೇವೆ” ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ.

ಇದರ ಜೊತೆಗೆ ದೆಹಲಿ ವಿಮಾನ ನಿಲ್ದಾಣದಲ್ಲೇ ಕಾಂಗ್ರೆಸ್‌ ನಾಯಕರು ಪ್ರತಿಭಟನೆಗಿಳಿದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!