ಸಾವರ್ಕರ್‌-ಹೆಡ್ಗೆವಾರ್ ಪಠ್ಯ ಕೈಬಿಟ್ಟ ರಾಜ್ಯ ಕಾಂಗ್ರೆಸ್: ಠಾಕ್ರೆ ನಿಲುವು ಪ್ರಶ್ನಿಸಿದ ‘ಮಹಾ’ ಡಿಸಿಎಂ ಫಡ್ನವೀಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯ ಶಾಲಾ ಪಠ್ಯದಿಂದ ವಿ.ಡಿ. ಸಾವರ್ಕರ್‌ ಹಾಗೂ ಹೆಡ್ಗೆವಾರ್ ಅವರ ಪಠ್ಯವನ್ನು ಕೈಬಿಟ್ಟಿರುವ ಕಾಂಗ್ರೆಸ್‌ ಸರ್ಕಾರದ ಕ್ರಮದ ಬಗ್ಗೆ ಮಹಾರಾಷ್ಟ್ರ ಶಿವಸೇನಾ (ಉದ್ಧವ್‌ ಬಣ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ ನಿಲುವೇನು ಎಂದು ಮಹಾರಾಷ್ಟ್ರ ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.

ಕರ್ನಾಟಕ ಸರ್ಕಾರ ಗುರುವಾರ ಸಚಿವ ಸಂಪುಟ ಸಭೆಯಲ್ಲಿ 6ರಿಂದ 10ನೇ ತರಗತಿವರೆಗಿನ ಕನ್ನಡ ಹಾಗೂ ಸಮಾಜ ವಿಜ್ಞಾನ ಪಠ್ಯದಿಂದ ಸಾವರ್ಕರ್‌ ಹಾಗೂ ಹೆಡ್ಗೆವಾರ್ ಅವರ ಪಠ್ಯವನ್ನು ಕೈಬಿಟ್ಟು, ಸಾವಿತ್ರಿ ಬಾಯಿ ಫುಲೆ, ಇಂದಿರಾ ಗಾಂಧಿ ಅವರಿಗೆ ನೆಹರೂ ಅವರು ಬರೆದ ಪತ್ರ ಹಾಗೂ ಅಂಬೇಡ್ಕರ್‌ ಅವರ ಕವಿತೆಗಳನ್ನು ಸೇರಿಸಲು ನಿರ್ಧರಿಸಿತ್ತು.

ಈ ಕುರಿತು ಮಹಾರಾಷ್ಟ್ರ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಸಾವರ್ಕರ್ ಹಾಗೂ ಹೆಡ್ಗೆವಾರ್ ಅವರನ್ನು ಪಠ್ಯದಿಂದ ತೆಗೆದು ಹಾಕಬಹುದು. ಆದರೆ, ಜನರ ಹೃದಯದಿಂದಲ್ಲ. ಕರ್ನಾಟಕ ಮಾಡೆಲ್‌ ಅನ್ನು ಮಹಾರಾಷ್ಟ್ರದಲ್ಲಿ ಅನುಸರಿಸಲು ವಿರೋಧ ಪಕ್ಷಗಳು ಬಯಸಿವೆ. ಆದ್ದರಿಂದ, ಈ ಎಲ್ಲ ಬೆಳವಣಿಗಳ ಬಗ್ಗೆ ಉದ್ಧವ್‌ ಅವರ ನಿಲುವೇನು’ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!