HEALTH| ಸಂಧಿವಾತದಿಂದ ಬಳಲುತ್ತಿರುವವರು ಈ ತರಕಾರಿಯಿಂದ ದೂರವಿರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಂಧಿವಾತವು ಸ್ವಯಂ ನಿರೋಧಕ ಕಾಯಿಲೆಯಾಗಿದೆ. ಇದು ನಮ್ಮ ಮೂಳೆಗಳು ಮತ್ತು ಸ್ನಾಯುಗಳ ಮೇಲೆ ದಾಳಿ ಮಾಡುತ್ತದೆ. ಕೀಲುಗಳ ಮೇಲೆ ನಿಧಾನವಾಗಿ ಪರಿಣಾಮ ಬೀರುತ್ತದೆ. ಕೆಲವು ದಿನಗಳ ನಂತರ, ತುಂಬಾ ಗಂಭೀರ ಸ್ಥಿತಿಯಾಗುತ್ತದೆ. ನಡೆಯಲು ಕೂಡ ಕಷ್ಟವಾಗಬಹುದು.

ಈ ಪರಿಸ್ಥಿತಿಗಳಲ್ಲಿ ಕೆಲವು ಆಹಾರ ಪದಾರ್ಥ ನಿಷಿದ್ಧ ಅದರಲ್ಲಿ ಟೊಮ್ಯಾಟೊ ಸೇವನೆ ಒಳ್ಳೆಯದಲ್ಲಿ ಅಂತಾರೆ ತಜ್ಞರು.

ಟೊಮ್ಯಾಟೊ ಮತ್ತು ಸಂಧಿವಾತದ ನಡುವಿನ ಸಂಬಂಧವೇನು?

ಸಂಧಿವಾತ ರೋಗಿಗಳಿಗೆ, ಟೊಮ್ಯಾಟೊ ಅವರ ದೈಹಿಕ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತವೆ. ಏಕೆಂದರೆ ಅವು ಕೀಲು ನೋವನ್ನು ವೇಗವಾಗಿ ಹೆಚ್ಚಿಸುತ್ತವೆ. ಟೊಮ್ಯಾಟೋಸ್ ವಿಟಮಿನ್ ಸಿ ಮತ್ತು ಆಸ್ಕೋರ್ಬಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಕ್ಯಾಲ್ಸಿಯಂ ಕೊರತೆಯನ್ನು ಉಂಟುಮಾಡುತ್ತದೆ. ಹೀಗಾಗಿ ಮೂಳೆಗಳು ಒಳಗಿನಿಂದ ಟೊಳ್ಳಾಗುತ್ತವೆ. ಸಂಧಿವಾತ ರೋಗಿಯು ಪ್ರತಿದಿನ ಟೊಮೆಟೊಗಳನ್ನು ಸೇವಿಸಿದರೆ, ಕೀಲು ನೋವುಗಳು ವೇಗವಾಗಿ ಹೆಚ್ಚಾಗುತ್ತವೆ. ಇದು ಊತವನ್ನು ಉಂಟುಮಾಡುತ್ತದೆ. ಸಂಧಿವಾತ ಫೌಂಡೇಶನ್ ಪ್ರಕಾರ, ಟೊಮ್ಯಾಟೊ ಸೋಲನೈನ್ ಎಂಬ ರಾಸಾಯನಿಕವನ್ನು ಹೊಂದಿರುತ್ತವೆ. ಇದು ಉರಿಯೂತವನ್ನು ಹೆಚ್ಚಿಸುತ್ತದೆ ಎಂದು ಅಧ್ಯನದಲ್ಲಿ ತಿಳಿದುಬಂದಿದೆ.

ಈ ತರಕಾರಿಗಳು ಸೇವಿಸಲು ಸುರಕ್ಷಿತವಾಗಿದೆ

ನೀವು ಸಂಧಿವಾತದಿಂದ ಬಳಲುತ್ತಿದ್ದರೆ, ನಿಮ್ಮ ಆಹಾರದಲ್ಲಿ ನೀವು ಹೆಚ್ಚು ಹಸಿರು ಪದಾರ್ಥಗಳನ್ನು ಸೇರಿಸಿಕೊಳ್ಳಬೇಕು. ಬೆಳ್ಳುಳ್ಳಿ, ಅರಿಶಿನ, ವಿವಿಧ ರೀತಿಯ ಸೊಪ್ಪು, ಇವುಗಳಲ್ಲದೆ, ಲವಂಗ ಮತ್ತು ದಾಲ್ಚಿನ್ನಿಯಂತಹ ಮಸಾಲೆಗಳನ್ನು ಸಹ ಆಹಾರಕ್ಕೆ ಸೇರಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!