ದಿನಭವಿಷ್ಯ| ನಿಮ್ಮ ಸುತ್ತಲಿನವರು ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಕೊರಗು ಬಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನಿಮ್ಮ ಸುತ್ತಲಿನವರು ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಕೊರಗು ಬಿಡಿ. ಇತರರ ಗಿಲೀಟಿನ ಮಾತಿಗೆ  ಮರುಳಾಗಬೇಡಿ. ಆರ್ಥಿಕ ಸದೃಢ.

ವೃಷಭ
ವಿರೋಧಿಗಳು ಅಪಪ್ರಚಾರ ನಡೆಸಬಹುದು. ಅದನ್ನು ಕಡೆಗಣಿಸಿ. ಸಮಾನಮನಸ್ಕರ ಸಂಗದಲ್ಲಿ ನೆಮ್ಮದಿ ಪಡೆಯುವಿರಿ.

ಮಿಥುನ
ಆತ್ಮೀಯರ ಮಧ್ಯೆ ಭಿನ್ನಾಭಿಪ್ರಾಯ ಉಂಟಾದೀತು. ಅದು ಉಲ್ಬಣಗೊಳ್ಳಲು ಅವಕಾಶ ನೀಡಬಾರದು. ಬಿಗುಮಾನ ಬಿಟ್ಟು ವ್ಯವಹರಿಸಬೇಕು.

ಕಟಕ
ನಿಮಗೆ ಹಿತವೆನಿಸದ ಬೆಳವಣಿಗೆ ಸಂಭವಿಸಬಹುದು. ಕೈಗೆತ್ತಿಕೊಂಡ ಕಾರ್ಯ ಬಿಡಬೇಡಿ. ಸಾಂಸಾರಿಕ ಭಿನ್ನಮತ ಹೆಚ್ಚಲು ಅವಕಾಶ ಕೊಡಬೇಡಿ.

ಸಿಂಹ
ಪ್ರಮುಖ ನಿರ್ಧಾರ ಫಲ ನೀಡುವ ದಿನ. ಈ ದಿನ ಸದುಪಯೋಗ ಮಾಡಿಕೊಳ್ಳಿ. ವೃತ್ತಿಯಲ್ಲಿ ಉದಾಸೀನತೆ ಬಿಟ್ಟು ಕಾರ್ಯವೆಸಗಿ.ಕೌಟುಂಬಿಕ ಶಾಂತಿ.

ಕನ್ಯಾ
ಸುತ್ತಲಿನ ಎಲ್ಲಾ ವ್ಯಕ್ತಿಗಳನ್ನು ಮೆಚ್ಚಿ ಸುವ ಪ್ರಯತ್ನ ಮಾಡಬೇಡಿ. ಅದು ಅಸಾಧ್ಯ. ಕೆಲವರನ್ನು ಕಡೆಗಣಿಸುವುದೇ ಒಳ್ಳೆಯದು.

ತುಲಾ
ಇತರರ ಕೆಲಸವನ್ನು ಟೀಕಿಸಲು ಹೋಗದಿರಿ. ಭವಿಷ್ಯದ ಕುರಿತಂತೆ ಚಿಂತೆ ಕಾಡಬಹುದು. ನಿಜವಾಗಿ ಅಂತಹ ಚಿಂತೆ ಅನವಶ್ಯ. ನಿರಾಳವಾಗಿರಿ.

ವೃಶ್ಚಿಕ
ಮನೆಯಲ್ಲಿ ಸೌಹಾರ್ದ ವಾತಾವರಣ.ಇದರಿಂದ ನಿಮಗೆ ಹೆಚ್ಚಿನ ಹುರುಪು. ದುಬಾರಿ ವಸ್ತು ಖರೀದಿಸುವ ಮುನ್ನ ಸರಿಯಾಗಿ ಪರಾಮರ್ಶಿಸಿ.

ಧನು
ಎಲ್ಲ ವಿಷಯಗಳಲ್ಲಿ ಪಾಸಿಟಿವ್ ಆಗಿ ಯೋಚಿಸಿ. ನೆಗೆಟಿವ್ ಚಿಂತನೆ ಬೇಡ. ಮನೆಯ ಸದಸ್ಯರ ಜತೆ ಸಂತೋಷದ ಕಾಲಕ್ಷೇಪ. ಆರ್ಥಿಕ ಪ್ರಗತಿ.

ಮಕರ
ಕೆಲವು ವಿಷಯಗಳ ಕುರಿತು ಅತಿಯಾಗಿ ಚಿಂತಿಸಿ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುವಿರಿ. ಕುಟುಂಬಸ್ಥರ ಜತೆ ಹೆಚ್ಚು ಕಾಲ ಕಳೆಯಿರಿ.

ಕುಂಭ
ಕುಟುಂಬದಲ್ಲಿ ಸಂಬಂಧ  ಸುಧಾರಣೆ. ಮನಸ್ತಾಪ, ಭಿನ್ನಮತ ನಿವಾರಣೆ. ಆಹಾರದಲ್ಲಿ ಹಿತಮಿತ ಸಾಧಿಸಿ.ಇಲ್ಲವಾದಲ್ಲಿ ಹೊಟ್ಟೆ ಕೆಡುವ ಪ್ರಸಂಗ ಉದ್ಭವಿಸೀತು.

ಮೀನ
ವ್ಯವಹಾರ,ಹಣದ ವಿಚಾರ ಎಲ್ಲವೂ ನಿಮಗೆ ಪೂರಕವಾಗಿ ಸಾಗುವುದು. ನೆರೆಯವರ ಜತೆ ಕಲಹಬೇಡ. ಅದರಿಂದ  ಮನಶ್ಯಾಂತಿ ಹಾಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!